Sunday, May 29, 2011

ದಿ ಸ್ಟೋರಿ ಆಫ್ ಟಿವಿ9


ಕರ್ನಾಟಕದ ಮೋಸ್ಟ್ ನಟೋರಿಯಸ್ ಕಳ್ಳರು, ಕ್ರಿಮಿನಲ್ಗಳು ಯಾರು?
ದಂಡುಪಾಳ್ಯ, ಉಮೇಶ್ ರೆಡ್ಡಿ, ಅಂಡರ್ ವಲ್ರ್ಡ ಡಾನ್ ಗಳು, ವೀರಪ್ಪನ್ ಇವರ್ಯಾರೂ ಅಲ್ಲ ಸ್ವಾಮಿ? ಇವರೆಲ್ಲರನ್ನೂ ಮೀರಿಸುವ ಒಂದು ಗ್ಯಾಂಗ್ ಇದೆ. ಅದೇ ಟೀವಿ9 ಗ್ಯಾಂಗ್!
ಟಿವಿ9 ಮೀಡಿಯಾ ಲೋಕದ ಮೋಸ್ಟ್ ನಟೋರಿಯಸ್ ಗ್ಯಾಂಗಿನ ಸದಸ್ಯರು ಮಹೇಂದ್ರ ಮಿಶ್ರಾ, ರವಿಕುಮಾರ್, ಮಾರುತಿ, ಶಿವಪ್ರಸಾದ್, ರವಿ ಅಜ್ಜೀಪುರ ಅಂಡ್ ಸತೀಶ್!
ಇದನ್ನು ಹೇಳಲು ಕಾರಣವಿದೆ. ಮೀಡಿಯಾ ಲೋಕದಲ್ಲಿದ್ದರೂ ಇತರೆ ಮೀಡಿಯಾ ಸಂಸ್ಥೆಗಳ ಹಕ್ಕನ್ನು ಗೌರವಿಸಿದ ಲಜ್ಜೆಗೇಡಿಗಳು ಇವರು. ಟಿವಿ9 ನಲ್ಲಿ ಯಾವುದೋ ಹಾದರದ ಸ್ಟೋರಿ ಸಿಕ್ಕರೂ ಅದಕ್ಕೆ ಎಕ್ಸ್ ಕ್ಲೂಸಿವ್ ಎಂದು ಟಿವಿ9 ಲೋಗೋ ಹಾಕಿಕೋಳ್ಳುವ ಈ ಲಜ್ಜೆಗೇಡಿಗಳು, ಬೇರೆ ಚಾನೆಲ್ ಗಳ ವಿಷಯಕ್ಕೆ ಬಂದರೆ ಅದನ್ನೆಲ್ಲಾ ಗಮನಿಸಿದ ಜಾಣರು.
ಇದಕ್ಕೆ ಕಾರಣ ಏನೆಂದರೆ ಟಿವಿ9ನ ಈ ಗ್ಯಾಂಗ್ ಕನಿಷ್ಠ ಮಟ್ಟದ ನಾಚಿಕೆ, ಮಾನ ಮಯರ್ಾದೆ ಇಲ್ಲ. ಇವರೆಲ್ಲ ಕಂಡ ಕಂಡಲ್ಲಿ ಕದ್ದಿದ್ದನ್ನು ತಂದು ಟಿವಿ9 ಕಾರ್ಯಕ್ರಮ ಮಾಡಿ ಹಾಕ್ತಾರೆ. ದಿನಾ 9.30 ಕ್ಕೆ ಬರುವ ವಿಶೇಷ ಕಾರ್ಯಕ್ರಮವಂತೂ ಫುಲ್ ಕದ್ದ ಮಾಲು ಮಯ! ಯಾವನೋ ಕಷ್ಟಪಟ್ಟು , ಬೆವರು ಸುರಿಸಿ, ವರ್ಷಗಟ್ಟಲೆ ರೀಸಚ್ರ್  ಮಾಡಿ, ಲಕ್ಷಾಂತರ ರೂಪಾಯಿ ಖಚರ್ು ಮಾಡಿ ತೆಗೆದ ಡಾಕ್ಯುಮೆಂಟರಿಯನ್ನು ಟಿವಿ9 ಗ್ಯಾಂಗ್ ಅಷ್ಟೇ ಸುಲಭವಾಗಿ ಕದ್ದುಬಿಡುತ್ತದೆ. ಅದಕ್ಕೆ ತಗುಲೋ ವೆಚ್ಚ ಸೊನ್ನೆ! ಒಂದೇ ಒಂದು ರೂಪಾಯಿ ಖಚರ್ಿಲ್ಲದೆ ಯಾರದ್ದೋ ಲಕ್ಷಾಂತರ ರೂಪಾಯಿ ವೆಚ್ಚದ ಕ್ರಿಯಾಶೀಲತೆಯನ್ನು ಟಿವಿ9 ಕದ್ದು ಬಿಡುತ್ತದೆ. 9.30 ಕ್ಕೆ ಬರುವ ಕಾರ್ಯಕ್ರಮಗಳ ಪಟ್ಡಿಯನ್ನೊಮ್ಮೆ ನೋಡಿ! ಏಲಿಯನ್, ಪುನರ್ಜನ್ಮ ಪಡೆದ ಬಾಲಕ, ಯಾರು? ಜಾದೂ ಕಾರ್ಯಕ್ರಮಗಳು, ಹೀಗೆ ಯಾವುದೇ ಸುದ್ದಿ ನೋಡಿ...ಅದು ಕದ್ದ ಮಾಲೇ! ಈ ಕದ್ದ ಮಾಲು ಇಲ್ಲದೆ ಟಿವಿ9 ಈ ಗ್ಯಾಂಗ್ ಗೆ ಒಂದೇ ಒಂದು 9.30 ರ ಕಾರ್ಯಕ್ರಮ ಮಾಡಲು ಆಗೋಲ್ಲ. ದೆಹಲಿಯಲ್ಲಿದ್ದಾಗ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದ ಶಿವಪ್ರಸಾದ್, 9.30 ಕ್ಕೆ ಸಾಕಷ್ಟು ವಿಶೇಷ ಕಾರ್ಯಕ್ರಮ ಮಾಡಿಕೊಟ್ಟಿದ್ದರು. ಓರ್ವ ರಿಪೋರ್ಟರ್ ಹೇಗೆ ಒಂದು ಕಾರ್ಯಕ್ರಮವನ್ನು ಕೇವಲ ತನ್ನ ಮಾತು, ವಿಭಿನ್ನ ಕಾನ್ಸೆಪ್ಟ ಹಾಗೂ ಉತ್ತಮ ವಾಕ್ಥ್ರೂ ಗಳು ಕೇವಲ ತನ್ನ ತನ್ನ ತಾಕತ್ತಿನ ಮೇಲೆೆ ತೆಗೆದುಕೊಂಡು ಹೋಗಿ, ಅರ್ಧ ಗಂಟೆ ವೀಕ್ಷಕರನ್ನು ಹಿಡಿದಿಡಬಹುದು ಎಂಬುದನ್ನು ಕನ್ನಡ ಎಲೆಕ್ಟ್ರಾನಿಕ್ ಮೀಡಿಯಾಕ್ಕೆ ಮೊದಲ ಬಾರಿ ತೋರಿಸಿದ್ದರು. ಆದರೆ ಯಾವಾಗ ಬೆಂಗಳೂರಿಗೆ ಬಂದನೋ, ಈತ ತನ್ನ ಕ್ರಿಯೇಟಿವಿಟಿ ಕಳೆದುಕೊಂಡಿದ್ದಾನೆ. ಫೀಲ್ಡ್ ಗೆ ಹೋಗಿ ಕಷ್ಟ ಪಡುವುದಕ್ಕಿಂತ ಎಸಿ ರೂಂನಲ್ಲೇ ಕುಳಿತು ಲೇಡಿ ಆಂಕರ್ ಗಳೊಂದಿಗೆ ಚಕ್ಕಂದವಾಡುತ್ತಾ ಕದ್ದು ಬರೆಯುವುದು ವಾಸಿ ಎಂದುಕೊಂಡಿದ್ದಾನೆ! ಕಂಪೆನಿಯ ಸಾವಿರಾರು ರೂಪಾಯಿ ಉಳಿತಾಯವಾಗುತ್ತದೆ. ರೆಸ್ಟೂ ಸಿಗುತ್ತದೆ ಎಂದು ಭಾವಿಸಿದ್ದಾನೆ. ಆದರೂ ಆಗೊಮ್ಮೆ ಈಗೊಮ್ಮೆ ರೈಲ್ವೇ ಟ್ರಾಕ್ ಮೇಲೆ ಹೋದೆ, ಸಮುದ್ರಕ್ಕೆ ಮೀನು ಹಿಡಿಯೋಕೆ ಹೋಗಿ ಬಂದೆ, ಚೀನಾಕ್ಕೆ ಹೋದೆ, ಎಂದು ಕಾರ್ಯಕ್ರಮ ಮಾಡ್ತಾನೆ. ಕನ್ನಡಿಗರಿಗೆ ಕಾಗರ್ಿಲ್ ಬೆಟ್ಟ, ಅಮರ್ ನಾಥ್, ವಾಘಾ ಬಾರ್ಡರ್ , ಚಂಬಲ್ ಕಣಿವೆ ಪರಿಚಯ ಮಾಡಿಸಿದ್ದೂ ಈತನೇ! ಶಿವಪ್ರಸಾದ್ ಬಗ್ಗೆ ಎಷ್ಟೇ ಕಟು ಟೀಕೆ ಮಾಡಿದರೂ, ಆತ ಫೀಲ್ಡ್ ಗೆ ಹೋಗಿ ಮಾಡಿಕೊಂಡು ಬರುವ ಕಾರ್ಯಕ್ರಮಗಳನ್ನು ಆತನ ಶತ್ರುಗಳೂ ಮೆಚ್ಚದೆ ಇರಲು ಸಾಧ್ಯವಿಲ್ಲ. ಆ ವಿಷಯದಲ್ಲಿ ಈತ ಅನ್ ಬೀಟೆಬಲ್... ಕಮಾನ್ ಶಿವಾ... ಲೇಡಿ ಆಂಕರ್ ಗಳ ಸಹವಾಸ ಬಿಟ್ಟು ಗೋ ಟು ಫೀಲ್ಡ್... ಮೇಕಪ್ ರೂಂನಿಂದ, ಡ್ರೆಸ್ಟಿಂಗ್ ರೂಂನಿಂದ...ಲೇಡಿ ಆಂಕರ್ ಗಳ ಸಹವಾಸದಿಂದ ಹೊರ ಬಾ...
ಬೆಂಗಳೂರಿಗೆ ಬರುತ್ತಲೇ ಶಿವಾ ಕದಿಯೋ ಕೆಲಸಕ್ಕೆ ಇಳಿದು ಬಿಟ್ಟ. ಇಂಟರ್ ನೆಟ್ ನಿಂದ ಹೇಗೆ ಇಂತಹ ಕಾರ್ಯಕ್ರಮಗಳನ್ನು ಕದಿಯಬಹುದು ಎಂದು ಮೀಡಿಯಾ ಜಗತ್ತಿಗೆ ತೋರಿಸಿದ್ದೇ ಶಿವಪ್ರಸಾದ್. ನಂತರ ಈ ಗ್ಯಾಂಗ್ ಗೆ ಸೇರ್ಪಡೆಯಾಗಿದ್ದು ರವಿ ಅಜ್ಜೀಪುರ ಹಾಗೂ ಸತೀಶ್ ಎಂಬ ಎಡಪಂಥೀಯ ಪತ್ರಕರ್ತರು. ಇವರೆಲ್ಲ ಸೇರಿ ಕಂಡ ಕಂಡದ್ದನ್ನು ಕದ್ದು ತಂದು ಟಿವಿ9 ನಲ್ಲಿ ಹಾಕಿ ಟಿ ಆರ್ ಪಿ ಏರಿಸಲು ಎಸಿ ರೂಂ ನಲ್ಲಿ ಬೆವರು ಹರಿಸಿದ್ದೇ ಹರಿಸಿದ್ದು ಮಾಡಿದರು. ರವಿ ಅಜ್ಜೀಪುರ ಬರುತ್ತಿದ್ದಂತೆ ಚೆಗುವಾರ ಸೇರಿದಂತೆ ಅನೇಕ ಕಮ್ಯೂನಿಸ್ಟ್ ಹೋರಾಟಗಾರರ ಕಾರ್ಯಕ್ರಮಗಳು ಪ್ರಸಾರವಾದವು. ಕದ್ದು ಬರೆದು, ಟ್ರಾನ್ಸ್ ಲೇಟ್ ಮಾಡಿ ಹಾಕಿದ್ದೇ ಪತ್ರಿಕೋದ್ಯಮ ಎಂದು ಅರೆಬುದ್ದಿ ಜೀವಿಯಾದ ರವಿ ಅಜ್ಜೀಪುರನ ಅಭಿಮತ. ಇನ್ನು ಸತೀಶ್ ಎಂಬ ಎಳಸು ಬಾಲಕನ ಬಗ್ಗೆ ಹೇಳದೇ ಇರೋದೆ ವಾಸಿ.
ಇದನ್ನೆಲ್ಲಾ ಏಕೆ ಬರೆಯುತ್ತಿದ್ದೇವೆ ಎಂದರೆ ಮೇ 29 ರಂದು ಸಂಜೆ 5.30ಕ್ಕೆ ಪ್ರಸಾರವಾದ ಭಾರತ ದರ್ಶನ ಎಂಬ ಕದ್ದ ಮಾಲಿನ ಸ್ಟೋರಿಯನ್ನು ಈ ಗ್ಯಾಂಗ್ ಮಾಡಿತ್ತು. ಅಸಲಿಗೆ ಈ ಕಾರ್ಯಕ್ರಮವನ್ನು ಬಿಬಿಸಿ ಇಂದ ಕದ್ದದ್ದು. ಕಾರ್ಯಕ್ರಮದ ಹೆಸರು 'ದಿ ಸ್ಟೋರಿ ಆಫ್ ಇಂಡಿಯಾ'. ಮೈಕೇಲ್ ವುಡ್ ಇದರ ಬರಹಗಾರ ಹಾಗೂ ನಿಮರ್ಾಪಕ. 6 ಭಾಗಗಳಲ್ಲ್ಲಿ ಭಾರತದ 10,000 ವರ್ಷಗಳ ಇತಿಹಾಸ ಹೇಳಲಾಗಿದೆ. 2007ರಲ್ಲಿ ಭಾರತದ 60ನೇ ಸ್ವಾತಂತ್ರೋತ್ಸವದ ಸಂದರ್ಭಕ್ಕೆ ಈ ಕಾರ್ಯಕ್ರಮ ಪ್ರಸಾರ ಮಾಡಲಾಗಿತ್ತು.
ಆದರೆ ಇದು ಬಿಬಿಸಿ ಮಾಡಿದ ಮಾತ್ರಕ್ಕೆ ವಿವಾದೀತವಾಗಿತ್ತೇ? ಇದು ದೃಶ್ಯಾತ್ಮಕವಾಗಿ ಮಾತ್ರ ಚನ್ನಾಗಿದೆ. ಆದರೆ ವಿಷಯದಲ್ಲಿ ಮಾತ್ರ ಅನೇಕ ಯಡವಟ್ಟುಗಳಾಗಿವೆ. ಇದರಲ್ಲಿರುವ ತಪ್ಪುಗಳನ್ನು ಬಹುತೇಕ ವಿಶ್ವದಲ್ಲಿನ ಎಲ್ಲಾ ಭಾರತೀಯರೂ ವಿರೋಧಿಸಿದ್ದಾರೆ. ಇದರಲ್ಲಿ ಆರ್ಯರು ಆಕ್ರಮಣ ಮಾಡಿದ್ದಾರೆ ಎಂದು ಹೇಳಿರುವುದು ಶುದ್ಧ ಸುಳ್ಳು. ಇದಕ್ಕೆ ಇಂದಿಗೂ ಯಾವುದೇ ಆಕರ್ಿಯಾಲಜಿಕಲ್ ಎವಿಡೆನ್ಸ್ ಸಿಕ್ಕಿಲ್ಲ. ಇದು ಎಡಪಂಥೀಯರ ಪಿತೂರಿ ಎಂದು ಈಗಾಗಲೇ ಸಾಬೀತಾಗಿ ಹೋಗಿದೆ. ಭಾರತದಲ್ಲಿನ ಪೂಜಾ ವಿಧಿ ವಿಧಾನಗಳೆಲ್ಲ ಮಧ್ಯ ಏಷ್ಯಾದಿಂದ ಆಮದಾದವು ಎಂದು ಹಸಿ ಸುಳ್ಳು ಹೇಳಲಾಗಿದೆ.
ಎಲ್ಲಕ್ಕಿಂತ ತಲೆಯ ಮೇಳೆ ಹೊಡೆದ ಹಾಗೆ ಹಿಂದೂ ನಾಗರೀಕತೆ ಭಾರತಕ್ಕೆ ಬಂದದ್ದೇ ಆಫ್ಗಾನಿಸ್ತಾನದ ಹಿಂದೂಖುಷ್ ಕಣಿವೆಯಿಂದ ಎನ್ನುತ್ತಾನೆ. ಹೀಗೆ ಬಿಬಿಸಿ ಡಾಕ್ಯುಮೆಂಟರಿಯಲ್ಲಿ ಭಾರತೀಯರೇ ಒಪ್ಪದ ಅನೇಕ ಅಂಶಗಳಿವೆ. ಇದು ದೊಡ್ಡ ವಿವಾದಕ್ಕೂ ಕಾರಣವಾಗಿತ್ತು. ಬಿಬಿಸಿ ಕುರಿತ ಆ ಎಲ್ಲಾ ವಿವಾದಾತ್ಮಕ ಅಂಶಗಳ ಲಿಂಕನ್ನು ನಾವು ಇಲ್ಲಿ ನಿಮಗೋಸ್ಕರ ನೀಡ್ತಿದ್ದೇವೆ. ಬೇಕಿದ್ದರೆ ನೋಡಿಕೊಳ್ಳಿ.
ಇದೇ ಸರಣಿಯನ್ನು ಸಾರಾ ಸಗಟಾಗಿ ಕದ್ದ ಟಿವಿ9 ಗ್ಯಾಂಗ್ ಇದಕ್ಕೆ ಭಾರತ ದರ್ಶನ ಎಂಬ ಹೆಸರು ನೀಡಿತ್ತು. ಪ್ರತಿ ಭಾರತೀಯನೂ ನೋಡಲೇಬೇಕಾದ ಪ್ರೋಗ್ರಾಂ ಎಂದು ಪ್ರಚಾರ ಮಾಡಿತ್ತು. ಆದರೆ ಇದನ್ನು ನೋಡಿದವರು ಇದನ್ನು ಟ್ರಾನ್ಸ್ ಲೇಟ್ ಮಾಡಿದ ರವಿ ಅಜ್ಜೀಪುರನ್ನನು ಹುಡುಕಿಕೊಂಡು ಹೋಗಿ ತದುಕಬೇಕು ಎನ್ನುವಷ್ಟ ಅಸಡ್ಡಾಳಾಗಿ ಟ್ರಾನ್ಸ್ ಲೇಟ್ ಮಾಡಿದ್ದಾನೆ. ಎಲ್ಲಕ್ಕಿಂತ ಹೆಚ್ಚಾಗಿ ಬಿಬಿಸಿ ಡಾಕ್ಯುಮೆಂಟರಿಯಲ್ಲೂ ಇಲ್ಲದ ಕೆಲ ಹಸಿ ಹಸಿ ಸುಳ್ಳುಗಳನ್ನೂ ಈತ ತನ್ನ ಎಡಪಂಥೀಯ ಬುದ್ದಿ ಸೇರಿಸಿ ಬರೆದಿದ್ದಾನೆ. ಎಲ್ಲಕ್ಕಿಂತ ಹೆಚ್ಚಾಗಿ ಈತ ಎಷ್ಟು ಶತಮೂರ್ಖ ಎಂಬುದನ್ನು ಸಾಬೀತು ಪಡಿಸಲು ಕೆಳಗಿನ ಒಂದೇ ಒಂದು ಅಂಶ ಸಾಕು.
ಟಿವಿ9 ಪ್ರಸಾರ ಮಾಡಿದ ಕಾರ್ಯಕ್ರಮದಲ್ಲಿ ರಾಜರೋಷವಾಗಿ 'ಚಾಣಕ್ಯ ಕನಿಷ್ಕನ ಗುರು' ಎಂದು ಬರೆಯುತ್ತಾನೆ. ಚಾಣಕ್ಯ ಮೌರ್ಯರ ಗುರು. ಚಂದ್ರಗುಪ್ತ ಮೌರ್ಯನ ಮೂಲಕ ನಂದರ ನಿನರ್ಾಮಕ್ಕೆ ಪಣ ತೊಟ್ಟವನು ಎಂದು ಚಡ್ಡಿಯಲ್ಲೇ ಸುಸ್ಸು ಮಾಡಿಕೊಳ್ಳುವ ಮಕ್ಕಳಿಗೆ ಗೊತ್ತು. ಆದರೆ ಸ್ಖಲನ ಮಾಡಿಕೊಳ್ಳುವ ಕತ್ತೆ ವಯಸ್ಸಾಗಿರುವ ರವಿ ಅಜ್ಜೀಪುರ ಎಂಬ ಆಕೃತಿಗೆ ಇದು ಗೊತ್ತಿಲ್ಲ ಎಂದರೆ ನಂಬ ಬಹುದೇ?  ಹೋಗಲಿ ಇದು ಬಿಬಿಸಿ ಮಾಡಿದ ತಪ್ಪೇ ಇರಬಹುದು. ಆದರೆ ಟ್ರಾನ್ಸ್ ಲೇಟ್ ಮಾಡುವಾಗ ಬೇಸಿಕ್ ನಾಲೆಜ್ ಇರಬೇಡವೇ? ಇತಿಹಾಸವನ್ನು ಟ್ರಾನ್ಸ್ಲೇಟ್ ಮಾಡಲು ಕೂರುವವನಿಗೆ ಸ್ವಲ್ಪ ಬೇಸಿಕ್ ಇತಿಹಾಸವೂ ಗೊತ್ತಿರಬೇಕು. ಸುಮ್ಮನೇ ಟ್ರಾನ್ಸ್ ಲೇಟ್ ಮಾಡಬಾರದು. ಇದೊಂದೇ ಸಾಕಲ್ಲವೇ ಈ  ಬುದ್ದಿಜೀವಿಯ ಸೋಗಲಾಡಿ ಎಷ್ಟು ಮೂರ್ಖ ಎಂದು ಹೇಳಲು? ಅಂದರೆ ಈತ ಕತ್ತೆ ತೋರಿಸಿ, ಇದು ಕುದುರೆ ಎಂದು ಟ್ರಾನ್ಸ್ ಲೇಟ್ ಮಾಡಿ ಎಂದರೆ ಹಾಗೇ ಮಾಡ್ತಾನಾ? ಅಥವಾ ತಪ್ಪು ಗೊತ್ತಿದ್ದರೂ ಲೆಫ್ಟಿಸ್ಟ್ ಐಡಿಯಾಲಜಿ ಇರುವ ಈತ ಬೇಕೆಂದೆ ಇಂತಹ ತಪ್ಪುಗಳನ್ನು ಯಾರೂ ಗಮನಿಸೋದಿಲ್ಲ ಎಂದು ಮಾಡಿದ್ದಾನಾ?
ಈತ ಬರೆದಿರುವ ಮತ್ತೊಂದು ಹಸಿ ಸುಳ್ಳು ಎಂದರೆ ಗ್ರೀಕರು ದಕ್ಷಿಣ ಭಾರತಕ್ಕೆ ಬಂದಿದ್ದರು ಎಂದು. ಅಲೆಕ್ಸಾಂಡರ್ ಎಲ್ಲಿಯವರೆಗೆ ಬಂದ. ಎಲ್ಲಿಂದ ವಾಪಸ್ ಹೋದ. ಭಾರತವನ್ನು ಟಚ್ ಮಾಡಲಿಕ್ಕೇ ಆತನಿಂದ ಆಗಲಿಲ್ಲ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಆದರೆ ಈತ ಮಾಡುವ ಟ್ರಾನ್ಸ್ ಲೇಟ್ ನಲ್ಲಿ ಗ್ರೀಕರು ದಕ್ಷಿಣ ಭಾರತದವರೆಗೆ ಬಂದಿದ್ದರಂತೆ. ಸ್ವಾಮಿ ಟಿವಿ9 ನವರೇ! ಯಾಕೆ ಇಂತಹ ಹಸಿ ಸುಳ್ಳುಗಳನ್ನು ಬೇಕು ಬೇಕು ಅಂತ ಪ್ರಚಾರ ಮಾಡ್ತಿದ್ದೀರಿ?
ಭಾರತದ ದರ್ಶನದ ಹೆಸರಿನಲ್ಲಿ ಇವರ ರಗಳೆ ಇಷ್ಟಕ್ಕೇ ನಿಲ್ಲೋಲ್ಲ. ರೋಮನ್ ಕಾಲದ ಮಡಕೆಗಳು ಸಿಕ್ಕಿವೆ ಎಂದು ಕೇರಳದ ಯಾವುದೋ ಒಡೆದ ಮಡಕೆಯ ಚೂರು ತೋರಿಸ್ತಾರೆ. ಬಿಬಿಸಿ ಯವರಿಗೇನೂ ಭಾರತ ಸರಿಯಾಗಿ ಗೊತ್ತಿಲ್ಲ. ಆದರೆ ಭಾರತದವರೇ ಆಗಿ ಭಾರತದ ದರ್ಶನ ಮಾಡಿ ಎಂದು ಶಂಖ ಊದುವ ನಿಮಗೂ ಗೊತ್ತಿಲ್ಲವೇ? ಅಸಲಿಗೆ ಟಿವಿ9 ನಲ್ಲಿ ಬಿಬಿಸಿ ಯಿಂದ ಕದ್ದು ಮಾಡಿದ ಡಾಕ್ಯುಮೆಂಟರಿಯಲ್ಲಿ ತೋರಿಸಿದ್ದು ಭಾರತದ್ದೇ ಮಡಿಕೆ ಚೂರು! ರೋಮನ್ ಕಾಲದ ಚೂರುಗಳು ಮೊದಲ ಬಾರಿಗೆ 1947 ರಲ್ಲಿ ಪಾಂಡಿಚೇರಿಯಲ್ಲಿ ಸಿಕ್ಕಿದ್ದವು. ನಂತರ ಕನರ್ಾಟಕದಲ್ಲಿ ನಂತರದ ವರ್ಷಗಳಲ್ಲಿ ನಡೆದ ಉತ್ಖನನದ ಸಂದರ್ಭದಲ್ಲಿ ರೋಮನ್ ಕಾಲದ ಕೆಲವು ವಸ್ತುಗಳು ದೊರೆತಿವೆ. ಆದರೆ ಟಿವಿ9 ಜನಪ್ರಿಯ. ನಾವು ಹೇಳಿದ್ದೆಲ್ಲ ವೇದವಾಕ್ಯ ಎಂಬಂತೆ ಜನರನ್ನು ನಂಬಿಸಲು ಬೇಕಾ ಬಿಟ್ಟಿ ಇತಿಹಾಸ ತಿರುಚಬೇಡಿ.
ಬಿಬಿಸಿಯವರೂ ಕೂಡಾ ಭಾರತವನ್ನು ಸರಿಯಾಗಿ ಅಧ್ಯಯನ ಮಾಡದೇ ಈ ಡಾಕ್ಯುಮೆಂಟರಿ ಮಾಡಿದ್ದಾರೆ ಎಂಬುದು ನಿವರ್ಿವಾದ. ಬಿಬಿಸಿ ಮಾಡಿದೆ ಎಂಬ ಕಾರಣಕ್ಕೆ ಅವರು ಮಾಡಿದ್ದೆಲ್ಲ ಸತ್ಯ. ಅಥವಾ ಫೈನಲ್ ಎಂದೇನೂ ಇಲ್ಲ. ಅವರೂ ತಪ್ಪು ಮಾಡುತ್ತಾರೆ. ಒಸಾಮಾ ಹತ್ಯೆಯಾದಾಗ 'ಒಬಾಮಾ' ಹತ್ಯೆ ಎಂದು ಅಮೇರಿಕಾ ಅಧ್ಯಕ್ಷರನ್ನೇ ಹತ್ಯೆ ಮಾಡಿದ್ದ ಚಾನೆಲ್ ಅದು. ಅದರಲ್ಲೂ ಮನುಷ್ಯರೇ ತಾನೇ ಕೆಲಸ ಮಾಡೋದು! ಇಂತಹ ಚಾನೆಲ್ ನವರು ಸರಿಯಾಗಿ ಭಾರತದ ಅಧ್ಯಯನ ಮಾಡದೇ ಡಾಕ್ಯುಮೆಂಟರಿ ತಯಾರಿಸಿದ್ದಕ್ಕೆ ಸಾಕ್ಷಿ ಎಂದರೆ ಅವರು ತೋರಿಸಿದ ಬಂಗಾರದ ಅಂಗಡಿ. ಭಾರತದಲ್ಲಿ ಸಾಕಷ್ಟು ಬಂಗಾರದ ನಾಣ್ಯಗಳು ಸಿಕ್ಕಿವೆ ಎಂದು ಹೇಳುತ್ತಾ ಅವರು ತೋರಿಸಿದ್ದು ದೊಡ್ಡ ಒಂದು ಬಂಗಾರದ ಅಂಗಡಿ! ಯಾವುದಾದರೂ ಮ್ಯೂಸಿಯಂಗೆ ಹೋಗಿದ್ದರೆ ಅಸಲಿ ಬಂಗಾರದ ನಾಣ್ಯಗಳನ್ನೇ ತೋರಿಸಬಹುದಿತ್ತು. ಕನರ್ಾಟಕದಲ್ಲೂ ಅನೇಕ ಕಡೆ ರಾಜ ಮಹಾರಾಜರುಗಳ ಕಾಲದ ಅಂತಹ ಬಂಗಾರದ ನಾಣ್ಯಗಳು ದೊರೆತಿವೆ. ಇಂತಹ ತಪ್ಪನ್ನು ಬಿಬಿಸಿ ಮಾಡುತ್ತೆ ಎಂದು ನೀವೂ ಮಾಡೋದಾ ಟಿವಿ9?
ಇನ್ನು ಈ ಅಜ್ಜೀಪುರ ಎಷ್ಟು ಎಡಪಂಥೀಯ ಎಂದರೆ ಮಥುರಾದ ಬಗ್ಗೆ ಟ್ರಾನ್ಸ್ ಲೇಟ್ ಮಾಡುವಾಗ ಇದು ಕೃಷ್ಣನ ಜನ್ಮ ಸ್ಥಾನ ಅಂತ 'ಹೇಳ್ತಾರೆ' ಎಂದು ಅದು ಅಡಗೂಲಜ್ಜಿ ಕಥೆ ಎಂಬಂತೆ ತಿಪ್ಪೇ ಸಾರಿಸ್ತಾನೆ. ಅದನ್ನೇ ಇವರು ಧೈರ್ಯವಾಗಿ ಜೆರುಸೆಲಂ, ಮೆಕ್ಕಾ ಬಗ್ಗೆ ಹೇಳಬಲ್ಲರಾ? ಅವರಿಗಾದರೆ ಕ್ರಿಸ್ತಿ ಹುಟ್ಟಿದ್ದು ಜೆರುಸೆಲಂ, ಪೈಗಂಬರ್ ಹುಟ್ಟಿದ್ದು ಮೆಕ್ಕಾದಲ್ಲಿ ಎಂದು ನಿಖರವಾಗಿ ಹೇಳ್ತಾರೆ. ಆದರೆ ಕೃಷ್ಣನ ವಿಷಯ ಬಂದ ಕೂಡಲೇ ಇವರಿಗೆ ಇತಿಹಾಸದಲ್ಲಿ ದಾಖಲೆ ಹುಡುಕುವ ಚಪಲ ಹುಟ್ಟುತ್ತದೆ.
ಈ ಮಹಾಶಯ ತನ್ನ ಟ್ರಾನ್ಸ್ ಲೇಷನ್ ನಲ್ಲಿ ಪೇಶಾವರ ಪಾಕಿಸ್ತಾನದಲ್ಲಿದೆ ಎಂದು ಜಡ್ಜ್ ಮೆಂಟ್ ಕೊಟ್ಟು ಬಿಡ್ತಾನೆ. ಆದರೆ ಸ್ವಾತಂತ್ರಕ್ಕೂ ಮುನ್ನ ಪೇಶಾವರ ಭಾರತದ ಭಾಗವಾಗಿತ್ತು ಎಂಬುದನ್ನು ಕಿಂಚಿತ್ತು ಒಪ್ಪಿಕೊಳ್ಳೋದಿಲ್ಲ. ಬಿಬಿಸಿ ಯವರಿಗೆ ಗೊತ್ತಿಲ್ಲದಿರಬಹುದು. ಆದರೆ ನಿಮಗೂ ಇತಿಹಾಸ ಗೊತ್ತಿಲ್ಲ ಎಂದರೆ ಹೇಗೆ?
ಇನ್ನು ಗೌತಮ ಬುದ್ಧನ ಚಿತ್ರ ತೋರಿಸುತ್ತಾ ಟಿವಿ9 ತಾನು ಕದ್ದ ಮಾಲಿನಲ್ಲಿ ತೋರಿಸಿದ್ದು ಗಡ್ಡ,ಮೀಸೆ ಇರುವ ಬುದ್ಧನನ್ನು! ಇದು ಯಾವ ಭಾರತೀಯ ಪರಂಪರೆಯ ಕಲ್ಪನೆ ಸ್ವಲ್ಪ ಹೇಳ್ತೀರಾ ಟಿವಿ9? ನಿಮಗೆ ಗಡ್ಡ ಮೀಸೆ ಇರುವ ಬುದ್ಧನ ಕಲ್ಪನೆ ಭಾರತದ ಕಲ್ಪನೆ ಅಲ್ಲ ಎನ್ನುವ ಬೇಸಿಕ್ ಕಾಮನ್ ಸೆನ್ಸ್ ಇದ್ದಿದ್ದರೆ ಈ ಡಾಕ್ಯುಮೆಂಟರಿ ಯನ್ನು ಕದ್ದು ಪ್ರಸಾರ ಮಾಡುವ ಗೋಜಿಗೇ ಹೋಗ್ತಿರಲಿಲ್ಲ. ಈಗಲೂ ಗೊತ್ತಿಲ್ಲದಿದ್ದರೆ ಟಿವಿ9 ನಟೋರಿಯಸ್ ಗ್ಯಾಂಗ್ ಸ್ವಲ್ಪ ಕಷ್ಟ ಪಟ್ಟಾದರೂ  ಅದು ಯಾವ ದೇಶದ ಕಲ್ಪನೆ ಎಂದು ಕಂಡುಕೊಳ್ಳಲಿ.
ಹೇಳುತ್ತಾ ಹೋದರೆ ಇಂತಹ ತಪ್ಪುಗಳ ನೂರು ಪಟ್ಟಿ ಮಾಡಬಹುದು! ಟಿವಿ9 ನಲ್ಲಿರುವ ಮೂರ್ಖರು ಬಿಬಿಸಿ ಪ್ರಸಾದ ಎಂದು ಕಕ್ಕ ತಿಂದು ಬಾಯಿ ಕೆಡಿಸಿಕೊಂಡಿದ್ದಾರೆ. ಅದನ್ನೇ ಭಾರತ ದರ್ಶನ ಎಂಬ ಹೆಸರಿನಲ್ಲಿ ರಾಜಾರೋಷವಾಗಿ ದೇಶದ ಮಾನ ಕಳೆಯುವಂತೆ ಪ್ರಸಾರ ಮಾಡುತ್ತಾರೆ. ಕೊನೆ ಪಕ್ಷ ಭಾರತ ದರ್ಶನ ಎಂಬುದು ಯಾರ ಪರಿಕಲ್ಪನೆ ಎಂದಾದರೂ ನಿಮಗೆ ಗೊತ್ತಾ? ಅದು ಆರ್ ಎಸ್ ಎಸ್ ನಾಯಕರಾಗಿದ್ದ ವಿದ್ಯಾನಂದ ಶೆಣೈ ಅವರ ಉಪನ್ಯಾಸದ ಹೆಸರು. ಅದೇ ಹೆಸರಿನ ಉಪನ್ಯಾಸದ ಸಿಡಿ, ಕ್ಯಾಸೆಟ್ ಗಳು ಲಭ್ಯವಿವೆ. ಅದನ್ನು ಕೇಳುವುದೇ ಒಂದು ಅದ್ಭುತ. ಅದನ್ನು ಕೇಳಿದ ನಂತರ, ನಿಜಕ್ಕೂ ಭಾರತ ದರ್ಶನ ಎಂದರೆ ಏನು ಎಂದು ಅರ್ಥವಾಗುತ್ತದೆ. ಅಸಲಿಗೆ ಚಡ್ಡಿ ಪತ್ರಕರ್ತ ಎಂದೇ ಕರೆಸಿಕೊಳ್ಳುವ ಶಿವಪ್ರಸಾದ್ ಈ ಉಪನ್ಯಾಸ ಕೇಳದಿರಲು ಸಾಧ್ಯವೇ ಇಲ್ಲ. ಕನಿಷ್ಠ ಈತನಿಗಾದರೂ ಸರಿ ತಪ್ಪುಗಳನ್ನು ವಿವರಿಸುವಷ್ಟು ತಾಕತ್ತಿಲ್ಲವೇ? ಡಿಯರ್ ಟಿವಿ9, ಎಲ್ಲರೂ ಕುಳಿತು ಆ ಉಪನ್ಯಾಸ ಮಾಲೆ ಕೇಳಿ. ಇಲ್ಲದಿದ್ದರೆ ಅದನ್ನೇ ಯಥಾವತ್ತು ಪ್ರಸಾರ ಮಾಡಿ, ಮಾಡಿರುವ ಪಾಪವನ್ನು ತೊಳೆದುಕೊಳ್ಳಿ..
ಇಷ್ಟೆಲ್ಲಾ ಕದ್ದರೂ ಕೊನೆಪಕ್ಷ ಕಾರ್ಯಕ್ರಮದ ಉದ್ದಕ್ಕೂ ಮೂಲ ನಿಮರ್ಾಪಕರಿಗೆ ಅದರ ಕ್ರೆಡಿಟ್ ಕೂಡಾ ಕೊಡೋಲ್ಲ. ಕೇವಲ ಎಲ್ಲೋ ಒಂದು ಕಡೆ 5-6 ಸೆಕೆಂಡ್ ಕೃಪೆ: ಬಿಬಿಸಿ ಎಂದು ತೋರಿಸಿದ್ದು ಬಿಟ್ಟರೆ ನಿಜವಾದ ಕ್ರೆಡಿಟ್ ಅವರಿಗೆ ಕೊಟ್ಟೇ ಇಲ್ಲ. ಇದೊಂದೇ ಕಾರ್ಯಕ್ರಮ ಅಲ್ಲ. 9.30 ಕ್ಕೆ ಕದ್ದು ಮಾಡುವ ಯಾವುದೇ ಕಾರ್ಯಕ್ರಮದ ಕ್ರೆಡಿಟ್ ಮೂಲ ಚಾನೆಲ್ ಗಳಿಗೆ ಹೋಗೊದೇ ಇಲ್ಲ. ಯಾಟದರೆ ಇದು ಟಿವಿ9 ಕಷ್ಟಪಟ್ಟು ಕದ್ದ ಮಾಲಲ್ಲವೇ? ಕದ್ದ ಮಾಲಿಗೆ ಕ್ರೆಡಿಟ್ ಕೊಡೋದು ಹೇಗೆ?
ಪೈರೆಸಿ ವಿರುದ್ಧ ಸಿನಿ ನಟರ ಬೈಟ್ ಹಾಕಿ ಪ್ರೋಗ್ರಾಂ ಮಾಡುವ, ಭ್ರಷ್ಟಾಚಾರದ ವಿರುದ್ಧ ಸಮರ ಸಾರುವ ಟಿವಿ9 ತಂಡಕ್ಕೆ ಈ ಕಳ್ಳತನ ಭ್ರಷ್ಟಾಚಾರ ಎಂಬುದು ಗೊತ್ತಿಲ್ಲ.
ಡಿಸ್ಕವರಿ, ನ್ಯಾಷನಲ್ ಜಿಯೋಗ್ರಾಫಿಕ್, ಅನಿಮಲ್ ಪ್ಲಾನೆಟ್ಸ್, ಹಿಸ್ಟ್ರಿ ಚಾನೆಲ್ ಹೀಗೆ ಎಲ್ಲವೂ ಟಿವಿ9 ವಿಕ್ಟಿಮ್ ಗಳೇ! ಈ ಎಲ್ಲಾ ಚಾನೆಲ್ ಗಳಿಂದಲೂ ಟಿವಿ9 ಕದ್ದು ತನ್ನ ಟಿಆರ್ ಪಿ ಏರಿಸಿಕೊಂಡಿದೆ. ಆದರೆ ಯಾರಿಗೂ ಕ್ರೆಡಿಟ್ ಕೊಟ್ಟಿಲ್ಲ. ಈ ಚಾನೆಲ್ ಗಳಿಗೆ ವಿಷಯ ಏನಾದರೂ ಗೊತ್ತಾಗಿ ಒಮ್ಮೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕೇಸು ಜಡಿಯಬೇಕು. ಆಗ ಗೊತ್ತಾಗುತ್ತದೆ. ಟಿವಿ9 ನಲ್ಲಿರುವ ಯಾರಿಗೂ ಅಂತಾರಾಷ್ಟ್ರೀಯ ನಿಯಮಗಳ ಬಗ್ಗೆ ಖಂಡಿತಾ ಗೊತ್ತಿಲ್ಲ.
ಟಿವಿ9ಗೆ ಇದು ತಕ್ಕದ್ದಲ್ಲ. ಮುಂದಾದರೂ ಟಿವಿ9 ಇಂತಹ ಯಡವಟ್ಟುಗಳನ್ನು ಮಾಡೋದಿಲ್ಲ ಎಂದು ನಂಬೋಣವೇ?

Wednesday, May 18, 2011

ಸುವರ್ಣ ನ್ಯೂಸ್’ ನಲ್ಲಿ ಪ್ರತಿ ಅರ್ಧ ಗಂಟೆಗೆ ‘ಕನ್ನಡಪ್ರಭ’ ಜಾಹೀರಾತು !









ವಿಶ್ವೇಶ್ವರ ಭಟ್ಟರಿಗೆ
ಸ್ವಾಮಿ,
ಯಾಕೋ ನಿಮ್ಮದು ಸ್ವಲ್ಪ ಅತಿಯಾಯ್ತು ಅನ್ನಿಸ್ತಿದೆ. ಕನ್ನಡದ ಕೆಲ ಪತ್ರಕರ್ತ ನೀವೂ ಸಹ ಏನು ಮಾಡಿದರೂ ದಕ್ಕಿಸಿಕೊಳ್ತೀನಿ ಎಂದು ನಿಧರ್ಾರ ಮಾಡಿದಂತಿದೆ. ಯಾಕೆ ನಿಮಗೆ ಜಗತ್ತಿನಲ್ಲಿ ಪ್ರತಾಪ್, ತ್ಯಾಗರಾಜ್, ಬಡ್ತಿ, ನಿಮ್ಮ ತಮ್ಮನ ಮಗ ವಿನಾಯಕ್ ಬಿಟ್ಟರೆ ಬೇರೆಯವರು ಕಣ್ಣಿಗೆ ಕಾಣುವುದಿಲ್ಲವೇ? ಬೇರೆಯವರು ಪತ್ರಕರ್ತರು ಎನಿಸುವುದಿಲ್ಲವೇ?
ಇದನ್ನು ಕೇಳಲು ಕಾರಣವಿಷ್ಟೆ. ಇತ್ತೀಚೆಗೆ ನೀವು ಕನ್ನಡದ ನಂಬರ್ 1 ಚಾನೆಲ್ ಸುವರ್ಣದಲ್ಲಿ (ಅಫ್ಕೋರ್ಸ್ ಹಮೀದ್ ಬಂದ ನಂತರ ಸುವರ್ಣ ನಂಬರ್ 1 ಚಾನೆಲ್ ಆಗಿದೆ) ಪ್ರತಿ ಅರ್ಧಗಂಟೆಗೆ ಕನ್ನಡಪ್ರಭ ಜಾಹೀರಾತು ಎಂದು ಹೇಳಿಕೊಂಡು ಗಂಟಲು ಹರಕೊಳ್ತಿದ್ದೀರಿ. ನಿಮ್ಮ ವೆಬ್ ಸೈಟ್ ನಲ್ಲಿ ಅದರ ಲಿಂಕ್ ಸಹ ನೀಡಿದ್ದೀರಿ.
ಯಾರ್ಯರಾರು ಏನೇನು ಡೈಲಾಗ್ ಹೊಡ್ದಿದ್ದಾರೆ ಎಂದು ಅದರ ಡೀಟೇಲ್ಸ್ ಸಹ ನೀಡಿದ್ದೀರಿ.
ಪ್ರತಾಪ್:
ನಾನು ಪ್ರತಾಪ್ ಸಿಂಹ!ನನಗೆ ಸುತ್ತಿ ಬಳಸಿ ಮಾತಾಡೋದು ಗೊತ್ತಿಲ್ಲ. ಬರೆಯೋದಂತೂ ಗೊತ್ತೇ ಇಲ್ಲ.ನನ್ನದೇನಿದ್ರೂ ನೇರಾ ನೇರ.ಪ್ರತಿ ಶನಿವಾರ ನಾನು ಬರೆಯುವಬೆತ್ತಲೆ ಪ್ರಪಂಚಇನ್ನು ಮುಂದೆ….
ಕನ್ನಡ ಪ್ರಭದಲ್ಲಿ

ತ್ಯಾಹರಾಜ್:
ನಾನು ಪಿ.ತ್ಯಾಗರಾಜ್
ಪ್ರತಿ ವಾರದ ರಾಜಕೀಯ ವಿದ್ಯಮಾನಗಳ ಆಳವಾದ ವಿಷ್ಲೇಷಣೆಗಾಗಿ
ಕನ್ನಡ ಪ್ರಭದಲ್ಲಿ ಪ್ರತಿ ಸೋಮವಾರ ಓದಿ ನನ್ನ ಅಂಕಣ….ಒಳಸುರಳಿ

ಬಡ್ತಿ
ನಾನು ರಾಧಾಕೃಷ್ಣ ಭಡ್ತಿ
ಪ್ರತಿ ಶುಕ್ರವಾರಕನ್ನಡ ಪ್ರಭದಲ್ಲಿ ನೀರೆಚ್ಚರದ ಬರಹಕ್ಕಾಗಿ ಓದಿ ನನ್ನ ಅಂಕಣ ಮೇಘ ಮೇದಿನಿ
ನೀರಿನ ಬಗ್ಗೆ ಸಮಗ್ರ ಮಾಹಿತಿ..ವೈಜ್ನಾನಿಕ ಹಾಗೂ ಸಾಮಾಜಿಕ ನೆಲೆಯಲ್ಲಿ
ಭಟ್ಟರ ಡೈಲಾಗ್:
ನಾನು ವಿಶೇಶ್ವರ ಭಟ್
ಈಗ ನಾನುಕನ್ನಡ ಪ್ರಭಕ್ಕೆ ಬದಲಾಗಿದ್ದೇನೆ..ಈಗ ನಿಮ್ಮ ಸರದಿ.
ಇದು ನಿಮ್ಮ ಡೈಲಾಗ್ ಗಳು.
ಪ್ರತಾಪ್ ಏನೇ ಬರೆದರೂ ಅದು ಕದ್ದ ಮಾಲು ಎಂಬುದರಲ್ಲಿ ಅನುಮಾನವೇ ಇಲ್ಲ. ರಾಷ್ಟ್ರೀಯ ಪತ್ರಿಕೆಗಳು, ಇಂಟರ್ನೆಟ್ನಲ್ಲಿ ಬರುವ ಮಾಲನ್ನೇ ಆತ ಕದ್ದು ತನ್ನದೇ ಲೇಖನ ಎಂಬಂತೆ ಉಣಬಡಿಸುತ್ತಾನೆ. ಆತನಿಗೆ ಜನರಲ್ ಕಮಾನ್ ಸೆನ್ಸ್ ಆಗಲಿ, ಸಾಮಾನ್ಯ ಜ್ಞಾನವಾಗಲಿ ಇಲ್ಲ ಎಂಬುದು ಆತನೊಂದಿಗೆ ಮಾತನಾಡಿದ ಅರ್ಧಗಂಟೆಯಲ್ಲಿ ಪ್ರೋವ್ ಆಗುತ್ತದೆ.
ಇನ್ನು ತ್ಯಾಗರಾಜ ನಿಮಗೇಕೆ ಅಚ್ಚುಮೆಚ್ಚು ಎಂದು ನೋಡಿದರೆ ಅದು ಒಟ್ಟಿಗೆ ಕೂತು ಉಣ್ಣುವ ಲಿಂಕ್. ನಿಮ್ಮ ಬಹುತೇಕ ವ್ಯವಹಾರಗಳು ನಡೆಯುವುದೇ ತ್ಯಾಗರಾಜ್ ಮೂಲಕ ಎಂಬ ಮಾತುಗಳೂ ಇವೆ. ವಿ.ಕ.ದಲ್ಲಿದ್ದಾಗ ಯಾವುದಾದರೂ ಸುದ್ದಿ ಬರಬೇಕಿದ್ದರೆ, ಚುನಾವಣೆ ಸಂದರ್ಭದಲ್ಲಿ ಒಂದೆರಡು ಸಾಲು ಒಳ್ಳೆಯ ಮಾತು ಬರೆಯಬೇಕೆಂದಿದ್ದರೆ ಅದಕ್ಕೆ ತ್ಯಾಗರಾಜನ ತಮ್ಮನ ಹೆಸರಿನಲ್ಲಿರುವ ಆಡ್ ಏಜೆನ್ಸಿ ಮೂಲಕ ನಿಮ್ಮದೇ ವಿ.ಕ.ಕಕ್ಕೆ ಕ್ಯಾಷ್ ಸಮೇತ ಪೇಮೆಂಟ್ ಮಾಡಿ ಜಾಹೀರಾತು ಕೊಡಬೇಕು. ನಂತರವೇ ಅವರ ಸುದ್ದಿ ಪ್ರಕಟವಾಗುತ್ತಿತ್ತು ಎಂಬುದು ನಿಮಗೆ ಗೊತ್ತಿಲ್ಲವೇ? ವಿ.ಕ.ಸೇರುವ ಮೊದಲು ಕೇರ್ ಆಫ್ ಫುಟ್ ಪಾತ್ ನಂತಿದ್ದ ತ್ಯಾಗರಾಜ್ ಇಂದು ಕೊಟಿಗಳ ಒಡೆಯ ಎಂದರೆ ಅದು ಹೇಗೆ ಸಾಧ್ಯ? ಇದರ ಒಳ ಸುರುಳಿಗಳೇನು??? ಇನ್ನು ತ್ಯಾಗರಾಜ್ ಅಂತಹ ರಾಜಕೀಯ ವಿಶ್ಲೇಷಕನೇನೂ ಅಲ್ಲ. ವಿ.ಕ.ದಲ್ಲಿ ಪ್ರಮೋಟ್ ಮಾಡಿ, ಮಾಡಿ, ಆತ ಆ ಸ್ಥಾನಕ್ಕೇರಿದ್ದಾನೆಯೇ ಹೊರತು, ಬರವಣಿಗೆ ಬಲದಿಂದ ಅಲ್ಲ. ಇಂದಿಗೂ ಆತನ ವಿಶ್ಲೇಷಣೆ, ಬರಹ ಎಷ್ಟು ಜಾಳು ಜಾಳು ಎಂದು ನಾಲ್ಕು ಜನ ರಾಜಕೀಯ ವಿಶ್ಲೇಷಕರನ್ನು ಕೇಳಿ. ನಿಮಗೇ ತಿಳಿಯುತ್ತೆ.
ಇನ್ನು ಬಡ್ತಿ ಮಹಾಶಯರೂ! ಇವರು ಜಗತ್ತಿನ ಏಕೈಕ್ ನೀರ್ ಸಾಧಕರು! ಎ.ಸಿ.ರೂಂನಲ್ಲೇ ಕುಳಿತು ತಣ್ಣನೆ ಕೋಕ್, ನೀರು ಕುಡಿಯುತ್ತಲೇ ಜಗತ್ತಿನ ನೀರಿನ ಸಮಸ್ಯೆ ಬರೆಯುವ ಮಹಾನ್ ಪತ್ರಕರ್ತನೀತ. ಈತನಿಗೋಸ್ಕರ ನೀವು ಶ್ರೀಪಡ್ರೆಯವರ ನೀರಿನ ಅಂಕಣಕ್ಕೆ ಕತ್ತರಿ ಹಾಕಿದ್ದು ನಿಜವಲ್ಲವೇ? ಇಂದಿಗೂ ನೀರಿನ ಬಗ್ಗೆ ಅಪಾರ ಸಾಧನೆ ಮಾಡಿದ, ಇದಕ್ಕಾಗಿ ಕ್ಷೇತ್ರಗಳಿಗೆ ಭೇಟಿ ನೀಡಿ, ಪ್ರತ್ಯಕ್ಷ ನೋಡಿಯೇ ಬರೆಯುವ ಶ್ರೀ ಪಡ್ರೆಯವರ ಅನುಭವ ದೊಡ್ಡದೋ, ಅಥವಾ ಎ ಸಿರೂಂನಲ್ಲಿ ಕುಳಿತು ಅಲ್ಲಲ್ಲಿ ಮಾಹಿತಿ ಸಂಗ್ರಹಿಸಿ ನೀರಿನ ಸಮಸ್ಯೆ ಬಗ್ಗೆ ಬರೆಯುವ ಈತನ ಅನುಭವ ದೊಡ್ಡದೋ ನೀವೇ ನಿರ್ಧರಿಸಿ. ನಿಮಗೆ ಬಕೆಟ್ ಹಿಡಿಯುತ್ತಾನೆ ಎಂಬ ಒಂದೇ ಕಾರಣಕ್ಕೆ ನೀವು ಈತನನ್ನು ದೊಡ್ಡ ಅಂಕಣಕಾರ ಎಂಬಂತೆ, ಬರಹಗಾರ ಎಂಬಂತೆ ಬಿಂಬಿಸ್ತಿದ್ದೀರಿ. ಸುವರ್ಣದಲ್ಲಿ ಜಾಹೀರಾತು ನೀಡ್ತಿದ್ದೀರಿ.
ನಿಮಗೆ ಸಂಬಂಧಿಕರು, ಬಕೆಟ್ ಹಿಡಿಯುವವರು ಆದರೆ ಅವರ ಅಂಡು ಎತ್ತೆತ್ತಿ ಮೇಲೆ ಕೂರಿಸುತ್ತೀರಿ. ನಿಮ್ಮ ತಮ್ಮನ ಮಗ ವಿನಾಯಕ್ಭಟ್ಗೆ ಮಂಗಳೂರಿನಲ್ಲಿ ಇದ್ದಾಗ ಏನು ಬರುತ್ತಿತ್ತು? ಆತನಿಗೆ ಮಂಗಳೂರು ಬಿಟ್ಟರೆ ಬೇರೆ ಜಿಲ್ಲೆ ಗೊತ್ತಿರಲಲಿಲ್ಲ. 10 ಪೋಲೀಸರ ಹೆಸರು ಬಿಟ್ಟರೆ ಬೇರೆಯವರು ಗೊತ್ತಿರಲಿಲ್ಲ. ವಿಕ.ಬಿಟ್ಟರೆ ಬೇರೆ ಇದೆ ಎಂಬುದು ಗೊತ್ತಿರಲಿಲ್ಲ. ಇಷ್ಟೆಲ್ಲಾ ಯಾಕೆ ಸ್ವಾಮಿ? ದೆಹಲಿ ಭಾರತದ ರಾಜದಾನಿ ಎಂಬುದೂ ಗೊತ್ತಿರಲಿಲ್ಲ. ಅಂಥಹವನ್ನು ನಿವು ದೆಹಲಿ ಪ್ರತನಿಧಿಯನ್ನಾಗಿ ಕಳಿಸಿದಿರಿ. 4 ವರ್ಷ ದೆಹಲಿಯಲ್ಲಿ ಕೂತು ಆತ ಏನು ಬರೆದನೋ ಗೊತ್ತಿಲ್ಲ. ಆದರೆ ಕನ್ನಡಿಗರು ವಿ.ಕ.ಕ್ಕೆ ಒಬ್ಬ ದೆಹಲಿ ಪ್ರತಿನಿಧಿ ಇದ್ದಾನೆ ಎಂಬುದನ್ನೇ ಮರೆತು ಬಿಟ್ಟಿದ್ದರು. ಅದಕ್ಕೆ ನಿಜಕ್ಕೂ ಅರ್ಹರಾದವರನ್ನು ನೀವು ಮೂಲೆಗುಂಪು ಮಾಡಿಬಿಟ್ಟಿದ್ದಿರಿ.
ಇನ್ನು ನಿಮ್ಮ ವಿಷಯಕ್ಕೆ ಬರೋದಾದರೆ ಭಟ್ರೆ, ನೀವು ಒಂದು ಥರಾ ಪಾಕಡಿ! ಜಗತ್ತಿಗೆ ಪ್ರಾಮಾಣಿಕತೆ ಬಗ್ಗೆ ಬಾಷಣ ಹೊಡೆಯುವ ನೀವು, ಬೆಂಗಳೂರಿನ ನಿಮ್ಮ ಮನೆಯ ನಿವೇಶನದ ಉದ್ದ ಅಗಲ, ಅದರ ಮೌಲ್ಯಗಳನ್ನು ಜಗತ್ತಿಗೆ ತಿಳಿಸ್ತೀರಾ? ಆ ನಿವೇಶನದಲ್ಲಿ ಕಟ್ಟಿಸ್ತಿರುವ ನಿಮ್ಮ ಮನೆಯಲ್ಲಿ ಒಟ್ಟು ಎಷ್ಟು ಫ್ಲೋರ್ ಗಳಿವೆ, ಸ್ವ್ವಿಮ್ಮಿಂಗ್ ಪೂಲ್ ಯಾವ ಮೂಲೆಗಿದೆ, ಲಿಫ್ಟ್ ಯಾವ ಕಂಪೆನಿಯದ್ದು, ಇಡೀ ಮನೆಗೆ ಖಚರ್ು ಮಾಡುತ್ತಿರುವುದೆಷ್ಟು? ವಿ.ಕ. ಸೇರಿದಾಗಿನಿಂದ ಇಂದಿನವರೆಗೆ ನೀವು ತಿಂಗಳ ಸಂಬಳದ ಲೆಕ್ಕದಲ್ಲಿ ಗಳಿಸಿದ್ದೆಷ್ಟು? ನಿಮ್ಮ ಒಟ್ಟು ಆಸ್ತಿ ಎಷ್ಟು? ಸ್ವಲ್ಪ ಎಕ್ಸ್ಪ್ಲೇನ್ ಮಾಡ್ತೀರಾ? ನೀವು ಬರೆಯುದನ್ನೇ ನಂಬಿಕೊಳ್ಳುವ ಅಮಾಯಕರು, ನೀವು ನೌಕರಿ ಕಳೆದುಕೊಂಡಾಗ ಮನೆ ಬಾಗಲಿಗೆ ಬಂದು 50 ಸಾವಿರ ಕೊಟ್ಟು ಹೋದರು ಎಂದು ನಾಚಿಕೆ ಇಲ್ಲದೆ ಬರೆದುಕೊಳ್ತೀರಲ್ಲ... ನಿಮ್ಮ ನಿಜ ಬಂಡವಾಳ ಗೊತ್ತಾದರೆ ಆ ವ್ಯಕ್ತಿಗೆ ಎಂತಹ ಆಘಾತವಾಗಬಹುದು ಗೊತ್ತಾ??? ಪ್ರಾಮಾಣಿಕತೆಗೆ ಬೆಲೆಯೇ ಇಲ್ಲವೇ ಭಟ್ಟರೆ?
ವಿಧಾನಪರಿಷತ್ ಗೆ ನಿಮ್ಮನ್ನು ನೇಮಕ ಮಾಡಲು ಬಿಜೆಪಿ ಮುಂದಾಗದಾಗ ನೀವು ಅವರ ಮೇಲೆ ದಾಳಿ ಮಾಡಲು ಶುರು ಮಾಡಿದ್ದು ಸುಳ್ಳ್ಳಾ? ಜೆಡಿಎಸ್ ನಿಮ್ಮನ್ನು ವಿಧಾನ ಪರಿಷತ್ ಗೆ ನೇಮಕ ಮಾಡ್ತೀವಿ ಎಂದ ವೇಳೆ ಕುಮ್ಮಿ, ದೇವೇಗೌಡರ ಜೊತೆ ಸೇರಿ ಪತ್ರಿಕೆಯ ಮೂಲಕ ಯುದ್ಧ ಸಾರಿದ್ದು ಸುಳ್ಳಾ? ಇದೇ ಸಿಎಂ. ಯಡಿಯೂರಪ್ಪ ಮೂಲಕ ನೀವು ಟೈಂಸ್ ಕಂಪೆನಿಗೆ 300 ಕೋಟಿಗೂ ಹೆಚ್ಚು ಬೆಲೆ ಬಾಳುವ ನಿವೇಶನವನ್ನು ಕೆಲವೇ ಕೋಟಿ ರೂಪಾಯಿಗಳಿಗೆ ಬರೆಸಿಕೊಂಡದ್ದು ಸುಳ್ಳಾ? ಮೈನಿಂಗ್ ಕಂಪೆನಿ ವ್ಯವಹಾರಕ್ಕೆ ಇಳಿಯಲು ಬಯಸಿದ್ದ ನೀವು ಅದಕ್ಕಾಗಿ ಮುಖ್ಯಮಂತ್ರಿಗಳ ಮನೆ ಎಡತಾಕಿದ್ದು ಸುಳ್ಳಾ? ಅರವಿಂದ ಲಿಂಬೇಹುಳಿಯ ಸಚಿವ ಸ್ಥಾನ ಉಳಿಸಲು ನೀವು ಮುಖ್ಯಮಂತ್ರಿವರೆಗೆ ಹೋಗಿ ಶಿಫಾರಸು ಮಾಡಲು ಯತ್ನಿಸಿದ್ದು ಸುಳ್ಳಾ? ನಿಮ್ಮ ಈ ಅತಿ ಆಸೆಗೆ ಯಡಿಯೂರಪ್ಪ ಸೊಪ್ಪು  ಹಾಕಲೆ ಇಲ್ಲ. ಆಗಲೇ ಅಲ್ಲವೇ ನೀವು ಸಿಎಂ ವಿರುದ್ಧ ದಾಳಿ ಆರಂಭಿಸಿದ್ದು???
ಇದರ ನಡುವೆಯೂ ವಿ.ಕದಿಂಧ ಕ.ಪ್ರ,ಕ್ಕೆ ಬಂದ ಮೇಲೆ ನೀವು ನಡೆದುಕೊಂಡ ರೀತಿ ಹೇಗಿತ್ತು? ನಿಮ್ಮ ಇಂತಹ ಅಂಧಾ ದಭರ್ಾರ್ ಊಹಿಸಿಯೇ ಉಮಾಪತಿಯಂತಹ ಹಿರಿಯರು ಕ.ಪ್ರ.ಬಿಟ್ಟು ಹೊರ ನಡೆದರು. ಶಿವು ರಾಜೀನಾಮೆ ಬೀಸಾಡಿ ಎದ್ದು ಹೋದ. ನಿಮಗೆ ಹೇಳುವವರು ಕೇಳುವವರು ಇಲ್ಲದಂತಾಗಿಬಿಟ್ಟಿದೆ. ಈಗ ನಿಮ್ಮ ನಾಲ್ಕು ಜನರ ಜಾಹೀರಾತುಗಳು, ನೀವು ಅಸಡ್ಡಾಳಾಗಿ ಮಾತನಾಡುವ ಶೈಲಿಯ ಸಂಭಾಷಣೆಗಳ ತುಣುಕುಗಳು ಪ್ರತಿ ಅರ್ಧಗಂಟೆಗೊಮ್ಮೆ ಸುವರ್ಣದಲ್ಲಿ ಬಂದು ನೋಡುಗರು ಟಿವಿ ಬಂದ್ ಮಾಡುವಂತೆ ಮಾಡಿ, ಟಿ ಆರ್ ಪಿ ಕುಸಿಯಲು ಸಹಾಯ ಮಾಡುತ್ತಿವೆ. ಯಾಕೆ ನಿಮಗೆ ಕ.ಪ್ರ.ದಲ್ಲೇ ಇದ್ದ ಹಿರಿಯ ಪತ್ರಕರ್ತರನ್ನು ಪ್ರೋಮೋ ಮಾಡಬೇಕು ಎನ್ನಿಸಲಿಲ್ಲವೇ? ಕ.ಪ್ರ.ಕ್ಕಾಗಿ ಜೀವನವನ್ನೇ ಸವೆಸಿದ ಹಿರಿಯರಾದ ಸತ್ಯ ಅವರ ಪ್ರೋಮೋ ಮಾಡಬೇಕು ಎನ್ನಿಸಲಿಲ್ಲವೇ? ಅವರಿಗಾಗಿ ಒಂದು ಒಳ್ಳೆಯ ಕಾಲಂ ಕೊಡಬೇಕು ಎನಿಸಲಿಲ್ಲವೇ? ಬದಲಿಗೆ ನಿಮಗೆ ಬಕೆಟ್ ಹಿಡಿಯುವವರದ್ದಷ್ಟೇ ಪ್ರೋಮೋ ಮಾಡಿದ್ದೀರಿ. ಇದರಲ್ಲಿ ಕನ್ನಡಪ್ರಭ ಪ್ರಮೋಟ್ ಆಗುವುದಕ್ಕಿಂತ ನಿಮ್ಮ ಪ್ರಮೋಷನ್ ಉದ್ದೇಶವೇ ಎದ್ದು ಕಾಣುತ್ತದೆ.
ಇನ್ನು ಸಂಬಳದ ವಿಷಯಕ್ಕೆ ಬಂದರೆ, ನಿಮಗೆ ತಿಂಗಳಿಗೆ ಸುಮಾರು 6 ರಿಂದ 8 ಲಕ್ಷ ರೂಪಾಯಿ. ತ್ಯಾಗರಾಜ್, ಬಡ್ತಿ, ಪ್ರತಾಪ್ ಗೆ ಹತ್ತಿರ ಹತ್ತಿರ ಒಂದು ಲಕ್ಷ! ನಿಮ್ಮ ತಮ್ಮನ ಮಗ ಎಂಬ ಕಾರಣಕ್ಕೆ ವಿನಾಯಕ ಭಟ್ಟನಿಗೆ 80 ಸಾವಿರ ಸಂಬಳ! ಅದೇ ದಶಕಗಳಿಂದ ಕ.ಪ್ರ.ದಲ್ಲಿ ಕೆಲಸ ಮಾಡುತ್ತಿರುವ, ನಿಮ್ಮೆಲ್ಲರಿಗಿಂತ ಪ್ರಾಮಾಣಿಕರಾಗಿರುವ, ಇವತ್ತಿಗೂ ಹವಾಯಿ ಚಪ್ಪಲಿಯಲ್ಲಿ ಬರುವ, ಸಿಟಿ ಬಸ್ ನಲ್ಲಿ, ಆಟೋದಲ್ಲಿ ಓಡಾಡುವ ಹಿರಿಯ ಪತ್ರಕರ್ತ ಸತ್ಯ ಅವರ ಸಂಬಳ ಎಷ್ಟು ನೀವೇ ಹೇಳಿ! ಅಥವಾ ಅದನ್ನೂ ನಾವೇ ಹೇಳಬೇಕೋ?
ರವಿ ಬೆಳಗೆರೆಯನ್ನು ಅಣ್ಣಾ ಎನ್ನುತ್ತಿದ್ದ ನೀವು ಆತನ ಅದೆಷ್ಟು ಪಾಪ ಕಾರ್ಯಗಳಲ್ಲಿ ಭಾಗಿಯಾಗಿಲ್ಲ. ಏನೇನನ್ನು ನೀವು ಹಂಚಿಕೊಂಡು ಮಾಡಿಲ್ಲ??? ತಿಂದಿಲ್ಲ??? ಈಗ ಆತನೇ ನಿಮ್ಮ ಶತ್ರು. ಅಂದರೆ ಕೆಲಸ ಆಗಬೇಕಿದ್ದರೆ ಯಾರನ್ನು ಬೇಕಿದ್ದರೂ ನಿಮ್ಮ ಮಿತ್ರರನ್ನಾಗಿ ಮಾಡ್ಕೋತೀರಿ. ಬೇಡದಿದ್ರೆ ಬಿಟ್ಟು ಬಿಡ್ತೀರಿ.
ಇದೆಲ್ಲ ನಿಮ್ಮ ಆತ್ಮ ರತಿ ಸೂಚಿಸುವುದಿಲ್ಲವೇ? ನೀವು ನಿಜಕ್ಕೂ ಪ್ರಾಮಾಣಿಕರೆ ಆಗಿದ್ದರೆ ನೀವೆಲ್ಲ ನಿಮ್ಮ ಆಸ್ತಿ ಇಷ್ಟಿಷ್ಟು ಎಂದು ಘೋಷಿಸಿ ನೋಡೋಣ. ಇನ್ನೂ ಪತ್ರಿಕೋದ್ಯಮದ ಅ ಆ ಇ ಈ ಕೂಡಾ ಕಲಿಯದ ನಿಮ್ಮ ತಮ್ಮನ ಮಗ ವಿನಾಯಕ ಭಟ್ಟ ಕೂಡಾ ಕೋಟಿಗೆ ಬಾಳುತ್ತಾನೆ ಅಂದರೆ ನಿಮ್ಮ ಗ್ಯಾಂಗ್ ಎಷ್ಟು ನಟೋರಿಯಸ್ ಇರಬಹುದು???
ನಿಮಗೆಲ್ಲಾ ಒಳ್ಳೆಯದಾಗಲಿ. ಪ್ರೆತಿ ಅರ್ಧಗಂಟೆ ಅಲ್ಲ, ಪ್ರತಿ ನಿಮಿಷವೂ ನಿಮ್ಮದೇ, ನಿಮ್ಮ ಗ್ಯಾಂಗಿನದ್ದೇ ಜಾಹೀರಾತು ಬರುವಂತಾಗಲಿ.

Tuesday, May 17, 2011

Hoogared ಎಂಬ ಶಬ್ದದ ಅರ್ಥ ನಿಮಗೆ ಗೊತ್ತಾ?

ಅರ್ಥವಿಲ್ಲದ ಮಾತು, ಏನೂ ಇಲ್ಲದಿದ್ದರೂ ತಾಸುಗಟ್ಟಲೆ ಮಾತನಾಡುವುದು, ಕತ್ತೆ ಉಚ್ಚೆ ಹೊಯ್ದಂತೆ ಮಾತನಾಡುವುದು, ಅಸಂಬಂಧ ಪ್ರಲಾಪ, ಹತಾಶೆ, ಹೇಳಿದ್ದನ್ನೇ ಹೇಳುತ್ತಾ ಇರುವುದು, ಮಾತಿನಲ್ಲಿ ಸ್ಪಷ್ಟತೆ ಇರದಿರುವುದು, ತನ್ನ ಅಭಿಪ್ರಾಯವನ್ನೇ ಎಲ್ಲರೂ ಕೇಳಬೇಕು, ತಾನು ಹೇಳಿದ್ದೆ ಸರಿ ಎಂಬಂತೆ ಮಾತನಾಡುವುದು...ಪಕ್ಷಪಾತಿಯಾಗಿ ಮಾತನಾಡುವುದು, ಒಂದೇ ದೃಷ್ಠಿಕೋನ ಹೊಂದಿ ಮಾತನಾಡುವುದು, ಪೂರ್ವಾಗ್ರಹ ಪೀಡಿತನಾಗಿ ಮಾತನಾಡುವುದು...ಗಿಳಿಪಾಠ ಹೇಳಿದಂತೆ ಹೇಳಿದ್ದನ್ನೇ ಹೇಳುವುದು...
ಇದೆಲ್ಲದ್ದಕ್ಕೂ ಇಂಗ್ಲೀಷ್ ನಲ್ಲಿ ಏನು ಹೇಳುತ್ತಾರೆ ಗೊತ್ತಾ? Hoogared
ಹೌದು ಇಂಗ್ಲೀಷ್ ಭಾಷಾ ಲೋಕಕ್ಕೆ ಈ ಶಬ್ದ ಸೇರಿ ಮೂರು ವರ್ಷಗಳೇ ಕಳೆದು ಹೋಗಿವೆ! Hoogared ಎಂಬ ಶಬ್ದವನ್ನು ಎಲ್ಲೋ ಕೇಳಿದಂತಿದೆ ಎಂದುಕೊಳ್ಳುತ್ತಿದ್ದೀರಾ? ಹೌದು ಈ ಶಬ್ಧದ ಮೂಲ ಟಿವಿ9 ಟೆರರ್ ರಿಪೋರ್ಟರ್ ಲಕ್ಞ್ಮಣ್ ಹೂಗಾರ್. ಇದಕ್ಕೆ ಕಾರಣ ಇಲ್ಲದಿಲ್ಲ. ಈ ರೀತಿ ಅರ್ಥವಿಲ್ಲದೆ ಗಂಟೆ ಗಂಟಲೆ ಅಸಂಭದ್ಧವಾಗಿ ಅರ್ಥವಿಲ್ಲದ ಮಾತನಾಡುವುದಕ್ಕೆ, ಏನೂ ಇಲ್ಲದಿದ್ದರೂ ತಾಸುಗಟ್ಟಲೆ ಮಾತನಾಡುವುದು, ಕತ್ತೆ ಉಚ್ಚೆ ಹೊಯ್ದಂತೆ ಮಾತನಾಡುವುದು, ಅಸಂಬಂಧ ಪ್ರಲಾಪ, ಹತಾಶೆ, ಹೇಳಿದ್ದನ್ನೇ ಹೇಳುತ್ತಾ ಇರುವುದು, ಮಾತಿನಲ್ಲಿ ಸ್ಪಷ್ಟತೆ ಇರದಿರುವುದು, ತನ್ನ ಅಭಿಪ್ರಾಯವನ್ನೇ ಎಲ್ಲರೂ ಕೇಳಬೇಕು, ತಾನು ಹೇಳಿದ್ದೆ ಸರಿ ಎಂಬಂತೆ ಮಾತನಾಡುವುದು...ಪಕ್ಷಪಾತಿಯಾಗಿ ಮಾತನಾಡುವುದು, ಒಂದೇ ದೃಷ್ಠಿಕೋನ ಹೊಂದಿ ಮಾತನಾಡುವುದು, ಪೂರ್ವಾಗ್ರಹ ಪೀಡಿತನಾಗಿ ಮಾತನಾಡುವುದು...ಗಿಳಿಪಾಠ ಹೇಳಿದಂತೆ ಹೇಳಿದ್ದನ್ನೇ ಹೇಳುವುದು ಇದೆಲ್ಲವೂ ಲಕ್ಷ್ಮಣ್ ಗೆ ಸಿದ್ದಿಸಿದೆ.
ಹಾಗಂತ ಈ ಶಬ್ದ ನಮ್ಮ ಸೃಷ್ಠಿಯಲ್ಲ ಸ್ವಾಮಿ!  ಈ ಶಬ್ದವನ್ನು ಹುಟ್ಟು ಹಾಕಿದ್ದು ಕನ್ನಡಿಗರೇ ಆದ, ಈಗ ಔಟ್ಲುಕ್ ಪತ್ರಿಕೆಯ ಎಡಿಟರ್ ಆಗಿರುವ ಕೃಷ್ಣಪ್ರಸಾದ್. ಅವರ ಪ್ರಸಿದ್ದ www.churumuri.wordpress.com ಬ್ಲಾಗ್ನಲ್ಲಿ 20 November 2007 ರಂದು ಈ ಶಬ್ಸವನ್ನು ಮೊದಲು ಹುಟ್ಟುಹಾಕಿದವರು ಅವರೇ! ಬೆಂಗಳೂರಿಗೆ ಔಟ್ ಸೋರ್ಸಿಂಗ್ ಸರ್ಿಂಗ್ ಹೆಚ್ಚಾಗಿ ಬರ್ತಿದ್ದಾಗ, ಇಂಗ್ಲೀಷ್ ಗೆ Bangalored ಎಂಬ ಹೊಸ ಪದ ಸೇರ್ಪಡೆಯಾಗಿತ್ತು.  Bangalored ಅರ್ಥ It refers to people who have been laid off from a multinational because their job has been moved to India — a business practice designed to save money that is arousing passions in some countries, especially Britain and the United States’.
http://en.wiktionary.org/wiki/Bangalored


Bangalored ಬಗ್ಗೆ ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ http://www.worldwidewords.org/turnsofphrase/tp-ban1.htm)



ಇದನ್ನು ಗಮನಿಸಿದ ಕೃಷ್ಣಪ್ರಸಾದ್, ಬೆಂಗಳೂರ್ಡ್ ಎಂಬುದು ವಿಶಿಷ್ಟ ಅರ್ಥ ಪಡೆದು ಇಂಗ್ಲೀಷ್ ಡಿಕ್ಷನರಿ ಸೇರಿದೆ. ಅದೇ ರೀತಿ ಕರ್ನಾಟಕದಿಂದ ಇನ್ನೂ ಯಾವ ಯಾವ ಶಬ್ಧಗಳನ್ನು ಶಬ್ದ ಶಾಸ್ತ್ರಜ್ಞರು ಹುಟ್ಟುಹಾಕಬಹುದು? ಅವುಗಳನ್ನು ಇಂಗ್ಲೀಷ್ ಡಿಕ್ಷನರೊಗೆ ಸೇರಿಸಬಹುದು ಎಂದು ಊಹಿಸಿ, ಕೆಲವು ಶಬ್ದಗಳನ್ನು ಹುಟ್ಟು ಹಾಕಿದ್ದರು. ಆಗಲೇ ಅವರು ಲಕ್ಪ್ಷ್ಮಣ್ ಹೂಗಾರ ಅಸಂಬಧ್ಧವಾಗಿ ಮಾತನಾಡುವುದು ಗಮನಿಸಿ, Hoogared  ಎಂಬ ಶಬ್ದ ಹುಟ್ಟು ಹಾಕಿದ್ದರು. ಅದಕ್ಕೆ ಅವರು ಕೊಟ್ಟ ವಿವರಣೆ ಹೀಗಿದೆ...Hoogared: to keep going on and on. As in, “There was no news, but to fill the airtime, the correspondent hoogared and hoogared till the commercial break.”



ಅವರು ಹುಟ್ಟು ಹಾಕಿದ ಈ ಶಬ್ದ ಹಾಗೂ ಇತರೆ ಶಬ್ದಗಳ ಚುರುಮುರಿ ಲಿಂಕ್ ಇಲ್ಲಿದೆ
http://churumuri.wordpress.com/2007/11/20/coming-nimmoppan-experiments-with-untruths/



ಇದನ್ನು ಓದಿ ಕೆಲ ಓದುಗರು ಹಾಕಿದ ಎರಡು ಕಾಮೆಂಟ್ ಗಳನ್ನೂ ಸಹ ನಿಮ್ಮ ಗಮನಕ್ಕಾಗಿ ಇನ್ನಿ ನೀಡಿದ್ದೇವೆ.
1.     hoogared – Lol..Really good.Keeps talking even if he has got nothing to say.kelavomme helodakke tudi illa, buda illa
‘aitihaasika putagalalli seride’- he used to say this sentence everytime he opned his mouth on the day Yediyurappa govt fell.(or was it during BSY’s oath takingt ceremony?:-)




2.     i think kp was referring to lakshman hoogar.. that tv9 reporter who keeeps on and on on on on saying everything and spoiling my head…



ಇದನ್ನು ಈಗ ಇಲ್ಲೇಕೆ ಪ್ರಸ್ತಾಪ ಮಾಡಿದ್ದೇವೆ ಎಂದು ನೀವು ತಲೆ ಕೆಡಿಸಿಕೊಂಡಿರಬಹುದು. ಏಕೆಂಧರೆ ಇದಕ್ಕೆ ಸಾಕ್ಷಿ ಎನ್ನುವಂತೆ ಲಕ್ಷ್ಮಣ್ ಹೂಗಾರ್ ಆತ್ಮ ರತಿಯ ಪರಾಕಷ್ಠೆ ತಲುಪಿದ್ದಾರೆ. ಪಾಪ್ಯುಲಾರಿಟಿಯ ಮದ ಹೂಗಾರ್ ತಲೆಗೆ ಹತ್ತಿದೆ. ಕೊಬ್ಬು ತಲೆಗೇರಿದೆ. ಇದನ್ನು ಹೇಳಲು ಕಾರಣವಿದೆ. 
ನಿನ್ನೆ ಅಂದರೆ ಮೇ 17 ರಂದು ಸಂಜೆ 7 ರಿಂದ 8.30 ರವರೆಗೆ ನಡೆದ ಟಿವಿ9ನ ರಾಜಕೀಯ ಚರ್ಚೆಯಲ್ಲಿ ಲಕ್ಷ್ಮಣ್ ಹೂಗಾರ್ ತನ್ನ ಎಲ್ಲಾ ಲಿಮಿಟೇಷನ್ ಗಳನ್ನು ದಾಟಿ ಹೋಗಿ, ತಾನು ಪಶ್ನಾತೀತ ಎನ್ನುವಂತೆ ನಡೆದುಕೊಂಡಿದ್ದಾನೆ. ಇಡೀ ಸಂಧರ್ಶನ ನೋಡಿದವರಿಗೆ ಬಿಜೆಪಿ ಸರಕಾರವನ್ನು ಕೇಂದ್ರ ಸರಕಾರ ತಕ್ಷಣ ವಜಾ ಮಾಡದಿರುವದಕ್ಕೆ ಜೆಡಿಎಸ್, ಕಾಂಗ್ರೆಸ್ ಗಿಂತ ಲಕ್ಷ್ಮಣ್ ಹೂಗಾರ್ ಹೆಚ್ಚು ಅಪ್ ಸೆಟ್ ಆಗಿದ್ದು ಎದ್ದು ಕಾಣುತ್ತಿತ್ತು. ಸಾಧ್ಯವಿದ್ದಿದ್ದರೆ ಲಕ್ಷ್ಮಣ್ ಟಿವಿ9 ಚರ್ಚೆಯಲ್ಲೇ ಬಿಜೆಪಿ ಸರಕಾರವನ್ನು ಬೀಳಿಸಿ ಬಿಡುತ್ತಿದ್ದನೋ ಏನೋ??
ಇಡೀ 'ಕಾಡು ಹರಟೆ ನೋಡಿದರೆ ಕೆಲ ಅಂಶಗಳು ಸ್ಪಷ್ಟವಾಗುತ್ತವೆ. ಮೊದಲನೆಯದಾಗಿ ಲಕ್ಷ್ಮಣ್ ವೃತ್ತಿಪರ ಪತ್ರಕರ್ತನಲ್ಲ. ಎರಡನೆಯದಾಗಿ ಲಕ್ಷಣ್ ತೆರೆದ ಮನಸ್ಸಿನಿಂದ ಚರ್ಚೆ ನಡೆಸುವುದಿಲ್ಲ. ಚರ್ಚೆಯಲ್ಲಿ ಲಕ್ಷ್ಮಣ್ ಖಾಸಗಿ ಅಭಿಪ್ರಾಯಗಳು ಬರುತ್ತವೆ. ಮತ್ತು ಅದನ್ನು ಎಲ್ಲರೂ ಒಪ್ಪಲೇಬೇಕು. ಮೂರನೆಯದಾಗಿ ತಾನು ಪತ್ರಕರ್ತನಾಗಿರುವುದರಿಂದ ಮತ್ತು ಇತ್ತೀಚೆಗೆ ಅನಿವಾರ್ಯವಾಗಿ ನಾಯಿ ಹಸಿದಿತ್ತು, ಅನ್ನ ಹಳಸಿತ್ತು ಎಂಬ ಪರಿಸ್ಥಿತಿ ನಿರ್ಮಾಣವಾಗಿ  ಟಿವಿ9 ಆತನನ್ನು ಪಾರ್ಟ್ ಟೈಂ ಆಂಕರ್ ಮಾಡಿರುವುದರಿಂದ ಈತನಿಗೆ ತಾನು ಜಗತ್ತಿನ ಅತಿ ಶ್ರೇಷ್ಠ ಪತ್ರಕರ್ತ ಎಂಬ ಮತ್ತು ನೆತ್ತಿಗೆ ಹತ್ತಿದೆ.
ಇದರ ಫಲವಾಗಿಯೇ ನಿನ್ನೆ ಇಡೀ ರಾಜ್ಯದ ಸಮಸ್ತ ಜನತೆ ಕಾರ್ಯಕ್ರಮ ನೋಡುತ್ತಿರುತ್ತಾರೆ ಎಂಬುದನ್ನೂ, ತಾನು ಜೆಡಿಎಸ್ ಅಥವಾ ಕಾಂಗ್ರೆಸ್ ಚೇಲಾ ಅಲ್ಲ, ಒಬ್ಬ ಆರ್ಡಿನರಿ ಪತ್ರಕರ್ತ ಎಂಬುದನ್ನೂ ಮರೆತು ಮರೆತು ಒನ್ ಸೈಡೆಡ್ ಕಾರ್ಯಕ್ರಮ ನಡೆಸಿದ್ದ! ನೇರವಾಗಿ ದಿನೇಶ್ ಗುಂಡೂರಾವ್ ಹಾಗೂ ಜೆಡಿಎಸ್ ದತ್ತಾ ಜೊತೆ ಸೇರಿಕೊಂಡು, ಧನಂಜಯ್ ಕುಮಾರ್ ಅವರನ್ನು ಟಾರ್ಗೆಟ್ ಮಾಡಿಕೊಂಡು, ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನಿಸಿದ. ತಾನು ಪತ್ರಕರ್ತ ಎಂಬುದನ್ನೇ ಮರೆತು, ಧನಂಜಯ್ ಕುಮಾರ್ ಅವರನ್ನು ಕೆಲ ಬಾರಿ ಧನಂಜಯ್..ಧನಂಜಯ್... ಎಂದು ಏಕವಷನದಲ್ಲೇ ಕರೆಯುವ ಮೂಲಕ ಅಸಹ್ಯ ಹುಟ್ಟಿಸಿದ. ಪತ್ರಕರ್ತ ಪಕ್ಷಪಾತಿಯಾಗಬಾರದು. ಆಂಕರ್ ಗಳು ಒನ್ ಸೈಡೆಡ್ ಅಟ್ಯಾಕ್ ಮಾಡಬಾರದು ಎಂದು ಈತನಿಗೆ ಗೊತ್ತೇ ಇಲ್ಲ. ಕಾರ್ಯಕ್ರಮ ನಡೆಸುವವರು ಎಕ್ಸೈಟ್ ಆಗಬಾರದು. ತಾಳ್ಮೆ ಕಳೆದುಕೊಳ್ಳಬಾರದು. ತಾನೇನೋ ಸರ್ವಜ್ಜ ಎಂಬಂತೆ ಪುಗಸಟ್ಟೆ ಉಪದೇಶ ನೀಡಬಾರದು. ಹಿಂದೆ ಅನೇಕ ಕಾರ್ಯಕ್ರಮಗಳಲ್ಲಿ ಈದ ಈ ರೀತಿ ತಾಳ್ಮೆ ಕಳೆದುಕೊಂಡು ಒದರಾಡಿದ್ದಕ್ಕೆ ಪರಾವೆಗಳಿವೆ. ಆ ರೀತಿ ಒದರಾಡಿದ್ದು ಕೇವಲ ಬಿಜೆಪಿಯವರ ವಿರುದ್ಧ ಮಾತ್ರ ಎಂಬುದು ನಿಮಗೆ ನೆನಪಿರಲಿ! ಆದರೂ ಈತ ಖ್ಯಾತ (ಕುಖ್ಯಾತ) ಟಿವಿ ಪತ್ರಕರ್ತ.
ಅಷ್ಟಕ್ಕೂ ಆಗಿದ್ದೇನು?
ಚರ್ಚೆಯಲ್ಲಿ ದಿನೇಶ್ ಹಾಗೂ ತಮ್ಮ ಎಂದಿನ ಅಸಂಬಂಧ ಶೈಲಿಯಲ್ಲಿ ದತ್ತಾ ಇಬ್ಬರೂ ಕೆಲಸಕ್ಕೆ ಬಾರದ ವಾದ ಮಾಡುತ್ತಿದ್ದರು. ಆಗ ಧನಂಜಯ್ ಕುಮಾರ್, ಈ ರೀತಿ ನಿಮ್ಮ ಜೊತೆ ಕಾಡು ಹರಟೆ ಮಾಡಲು ನನಗೆ ಸಮಯವಿಲ್ಲ ಎಂದರು! ಅಷ್ಟೇ!
ಅಕಟಕಟಾ ಎಂದು ಲಕ್ಷ್ಮಣ್ ಹೂಗಾರ್ ಪಿತ್ತ ನೆತ್ತಿಗೇರಿಬಿಟ್ಟಿತ್ತು! ಮೊದಲೇ 8ತಿಂಗಳುಗಳಿಂದ ಬಿಜೆಪಿ ಉರುಳಿಸಲು ಓರ್ವ ಪತ್ರಕರ್ತನಾಗಿ ಸಾಮಿನ ಮೇಲೆ ಸಾಮು ಹೊಡೆದದ್ದೇ ಹೊಡೆದದ್ದು ಮಾಡಿದ್ದ ಲಕ್ಷ್ಮಣ್, ಈಗ ಕೇಂದ್ರ ಸರಕಾರ ಬಿಜೆಪಿ ವಜಾ ಮಾಡಲು ಮುಂದಾಗದ್ದು ನೋಡಿ ಹತಾಶನಾಗಿದ್ದ. ಹತಾಶೆ ಹೊರ ಬರಲು ಒಂದು ನೆಪ ಬೇಕಿತ್ತು. ಧನಂಜಯ್ ಕುಮಾರ್ ಹೇಳಿದ್ದು ಕೇಳಿ ಲಕ್ಷ್ಮಣ್ ಕೆರಳಿದ ವೀರ ಲಕ್ಷ್ಮಣನಾಗಿ ಬಿಟ್ಟ. ಆತನ ಉಗ್ರ ಪ್ರತಾಪ ನೋಡಿ, ದತ್ತಾ, ದಿನೇಶ್ ಸಹ ದಂಗೆದ್ದು ಹೋಗಿದ್ದರು! ಅವರ ಮುಖದಲ್ಲೂ ಲಕ್ಷ್ಮಣ್ ಗೆ ಏನಾಯ್ತು? ಎಂಬ ಪ್ರಶ್ನಾರ್ಥಕ ಚಿನ್ಹೆ ಮೂಡುತ್ತಿತ್ತು. ಆದರೆ ಚರ್ಚೆ ತಮ್ಮ ಪರವಾಗಿ ಆಗುತ್ತಿರುವುದನ್ನು ಅರಿತು, ಈ ಇಬ್ಬರೂ ಲಕ್ಷ್ಮಣ್ ಜೊತೆ ಸೇರಿ ಧನಂಜಯ್ ಕುಮಾರ್ ಹೇಳಿದ್ದು ಏನೋ ಮಹಾಪರಾಧ ಎನ್ನುವಂತೆ ದಾಳಿ ನಡೆಸಿದರು. ಅಲ್ಲಿಂದ ಚರ್ಚೆ ಪೂರ್ತಿ ಹಳ್ಳ ಹಿಡಿದು ಹೋಗಿತ್ತು. ನೀವು ಹೇಳಿದ್ದು ವಾಪಸ್ ತೆಗೆದುಕೊಳ್ಳಿ! ನಿಮ್ಮನ್ನು ನೀವು ಏನು ಅಂದುಕೊಂಡಿದ್ದೀರಿ! ಕಾಡು ಹರಟೆ ಎಂದರೆ ಏನರ್ಥ! ನಾವೇನು ಕಾಡು ಹರಟೆ ಮಾಡ್ತಿದ್ದೇವಾ ಎಂದು ಟಿವಿ9 ಗೇ ಬೈದು ಬಿಟ್ಟರೇನೋ! ತನ್ನ ಮರ್ಮಕ್ಕೆ ಝಾಡಿಸಿ ಒದ್ದು ಬಿಟ್ಟರೇನೂ ಎಂಬಂತೆ ಅಲಲಲಾಲಾಲಾಲ ಎಂದು ಕೂಗಾಡಿ ಬಿಟ್ಟ ಲಕ್ಷ್ಮಣ್ ನೋಡಿದರೆ ಎಂಥವರಿಗೂ ಪಿಚ್ಚೆನಿಸಿತ್ತು.
ಅಷ್ಟಕ್ಕೂ ನಿಲ್ಲದೆ, ನೀವು ಬಿಜೆಪಿಯವರು ಮಾಡೋ ನಾಟಕ ನೋಡಿ ನಾವೆಲ್ಲ ಸುಮ್ಮನೇ ಕೂರಬೇಕಾ? ಎಂದೆಲ್ಲ ಹುಚ್ಚರಂತೆ ಕೂಗಾಡಿಬಿಟ್ಟ. ಅದೇ ಪ್ರಶ್ನೆಯನ್ನು ಜೆಡಿಎಸ್, ಕಾಂಗ್ರೆಸ್ ನವರಿಗೆ ಕೇಳಲು ಮಾತ್ರ ಲಕ್ಷ್ಮಣ್ ಗೆ ನೆನಪಾಗುವುದಿಲ್ಲ.! ಶಾಸಕರನ್ನು ಹೈಜಾಕ್ ಮಾಡಿ ಕರೆದುಕೊಂಡು ಹೋಗಿದ್ದು, ಸರಕಾರ ಬಿಳಿಸಲು ಯತ್ನಿಸಿದ್ದು, ರಾಜ್ಯದಲ್ಲಿ ಬಿಕ್ಕಟ್ಟು ಸೃಷ್ಠಿ ಮಾಡಿದ್ದು ಯಾವುದೂ ಈ ಹೂಗಾರ್ಡ್ ಗೆ ನಾಟಕ ಎನ್ನಿಸುವುದೇ ಇಲ್ಲ.
ಧನಂಜಯ್ ಕುಮಾರ್ ಅದಕ್ಕೆ ಸ್ಪಷ್ಟನೆ ನೀಡಲು ಹೋದರೂ ಅವರಿಗೆ ಮಾತನಾಡಲು ಅವಕಾಶ ನೀಡದಂತೆ ಲಕ್ಷ್ಮಣ್ ತಾನು ಓರ್ವ ಪತ್ರಕರ್ತ ಮಾತ್ರ. ಜಡ್ಜ್ ಅಲ್ಲ ಎಂಬುದನ್ನು ಮರೆತು ಅಸಹ್ಯಕರವಾಗಿ ಕೂಗಾಡಿದ್ದು ಎದ್ದು ಕಂಡಿತ್ತು. ಇಡೀ ಚರ್ಚೆ ಉದ್ದಕ್ಕೂ ಲಕ್ಷ್ಮಣ್ ಮಾತಿನ ದಾಳಿ ಕೇವಲ ಬಿಜೆಪಿ ಕಡೆಗಿತ್ತೇ ಹೊರತು, ಸಂವಿಧಾನಕ್ಕೆ ವಿರುದ್ಧವಾಗಿ ಬಹುಮತ ಇದ್ದಾಗಲೂ ಗವರ್ನರ್ ತಪ್ಪು ನಿರ್ದಾರ ತೆಗೆದುಕೊಂಡ ಬಗ್ಗೆ ಒಮ್ಮೆಯೂ ಕೇಳಲಿಲ್ಲ.! ಎಲ್ಲದಕ್ಕೂ ಕಾರಣವಾದ 10 ಶಾಸಕರನ್ನು ಕುಮಾರಸ್ವಾಮಿ ಹೈಜಾಕ್ ಮಾಡಿಕೊಂಡು ಹೋಗಿದ್ದಕ್ಕೆ ಒಮ್ಮೆಯೂ ತಕರಾರು ಮಾಡಲಿಲ್ಲ! ಅಲಲಲಲಲಾ ಎಂದು ಕುಗಲಿಲ್ಲ. ನಿಮ್ಮ ನೋಟಿಸ್ ಗೆ ಅಂತ ಆ ಚರ್ಚೆಯ ಒಂದು ಸಣ್ಣ ಝಲಕ್ ಇಲ್ಲಿ ಹಾಕಿದ್ದೇವೆ. ನೋಡಿ, ನಿಜವಾದ ಲಕ್ಷ್ಮಣಾವತಾರ ಅರ್ಥ ಮಾಡಿಕೊಳ್ಳಿ



ಇದು ಕೇವಲ ಝಲಕ್ ಮಾತ್ರ! ನಾವು ಇಡೀ ಕಾರ್ಯಕ್ರಮವನ್ನೇ ರೆಕಾರ್ಡ್ ಮಾಡಿಟ್ಟುಕೊಂಡಿದ್ದೇವೆ. ಅವಶ್ಯಕತೆ ಬಿದ್ದಲ್ಲಿ ಇಡೀ ಚರ್ಚೆಯನ್ನು ಇಲ್ಲಿ ಹಾಕಲು ಸಿದ್ದ. ಅಥವಾ ಸಂಬಂಧಿಸಿದವರಿಗೆ ದೂರು ನೀಡಲು ಸಿದ್ದ. ಕಳೆದ 10 ತಿಂಗಳಲ್ಲಿ ಹಾಗೂ ಟಿವಿ9 ಸೇರಿದ ನಂತರ ಲಕ್ಷ್ಮಣ್ ಮಾಡಿದ ಅವಾಂತರಗಳ ಪಟ್ಟಿಯೇ ಇದೆ. ಅವುಗಳಲ್ಲಿ ಕೆಲವನ್ನು ಪುರಾವೆ ಸಮೇತ ಇಲ್ಲಿ ನೀಡಿದ್ದೇವೆ.
ಅಷ್ಟಕ್ಕೂ ಲಕ್ಷ್ಮಣ್ ಈ ರೀತಿ ಪದೇ ಪದೇ ಬಿಜೆಪಿ ವಿರುದ್ಧ, ಬಿಜೆಪಿ ನಾಯಕರ ವಿರುದ್ಧ, ಮುಖ್ಯಮಂತ್ರಿಗಳ ವಿರುದ್ಧ ಏಕೆ ಅಟ್ಯಾಕ್ ಮಾಡ್ತಾನೆ? ಇಲ್ಲೇ ಇರೋದು ಸಸ್ಪೆನ್ಸ್!
ಲಕ್ಷ್ಮಣ್ ನಿಜ ಹೇಳಬೇಕೆಂದರೆ ಒಬ್ಬ ಎಡಪಂಥೀಯ ಕಾಮ್ರೇಡ್. ಆತನ ಬದುಕು, ಬರಹ, ಎಲ್ಲದರಲ್ಲೂ ಇದು ಹಾಸುಹೊಕ್ಕಾಗಿದೆ. ಹೀಗಾಗಿ ಬಿಜೆಪಿ, ಆರ್ ಎಸ್ ಎಸ್ ನವರನ್ನು ಮುಟ್ಟಿದರೆ ಹೇಸಿಗೆ ತಿಂದಷ್ಟೇ ಹೇಸಿಗೆ ಪಟ್ಟುಕೊಳ್ಳುತ್ತಾನೆ. ಈಗಲ್ಲ! ಕನ್ನಡಪ್ರಭದಲ್ಲಿ ಇದ್ದಾಗಲೂ ಇವನದ್ದು ಇದೇ ಕಥೇ. ಈತನ ಭಾನಗಡಿಗಳನ್ನು, ಇಂತಹ ಸಹಿಸದೇ ಎಚ್.ಆರ್. ರಂಗನಾಥ್ ಶಿಫಾರಸು ಮಾಡಿ, ಈತನನ್ನು ಕನ್ನಡಪ್ರಭದಿಂದ ಹೊರಗೆ ಹಾಕಿದ್ದರು. ನಂತರ ಹೊಟ್ಟೆಪಾಡಿಗೆ ಎಲ್ಲೆಲ್ಲೋ ಕೆಲಸ ಮಾಡಿ ಈಟಿವಿ ಸೇರಿಕೊಂಡ. ಅಲ್ಲಿಂದ ಟಿವಿ9. ಇಲ್ಲಿ ಮೊದಲು ಲೂಯಿಸ್ ಎಂಬಾತ ಪೊಲಿಟಿಕಲ್ ಹೆಡ್ ಆಗಿದ್ದ. ಲಕ್ಷ್ಮಣ್ ಆತನ ಅಸಿಸ್ಟೆಂಟ್. ಏನೇನೋ ಹುನ್ನಾರ ಮಾಡಿ ಆತನನ್ನು ಅಲ್ಲಿಂದ ಎತ್ತಂಗಡಿ ಮಾಡಿಸಿದ. ವಿಜಯ ಲಕ್ಷ್ಮೀ ಲಕ್ಷ್ಮಣ್ ಗಿಂತ ಚೆನ್ನಾಗಿ ರಿಪೋರ್ಟಿಂಗ್ ಮಾಡುತ್ತಿದ್ದರೂ ಆಕೆಯನ್ನು ತುಳಿದು, ಪೊಲಿಟಿಕಲ್ ನಿಂದ ಓಡಿಸಿದ. ನಂತರ ಪೊಲಿಟಿಕಲ್ ಗೆ ಯಾರೂ ಎಂಟ್ರಿಯಾಗದಂತೆ ನೋಡಿಕೊಂಡ. ತನ್ನ ಮಾತು ಕೇಳುವ, ಬಾಲ ಬಡುಕರಂತಿರುವ ಹರಿಪ್ರಸಾದ್, ವಿನಾಯಕ್, ಈತನಿಗೆ ಪರಮಾಪ್ತರು.
ಇದಿಷ್ಟೂ ಆತನ ಹಿನ್ನೆಲೆ. ಇಂತಹ ನಟೋರಿಯಸ್ ಇರೋ ಈತನಿಗೆ ನಕ್ಸಲ್ ಲಿಂಕ್ ಸಹ ಇದೆ ಎಂಬ ಮಾತುಗಳು ಕನ್ನಡಪ್ರಭದಲ್ಲೇ ಕೇಳಿ ಬಂದಿದ್ದವು. ಇದಕ್ಕೆ ಸಾಕ್ಷಿ ಎಂಬಂತೆ ಈಗಲೂ ಈತ ನಕ್ಸಲ್ ಸಿಂಪಥೈಸರ್. ಇದನ್ನೂ ಈತ ನೇರವಾಗಿ ತನ್ನ ಫೇಸ್ ಬುಕ್ನಲ್ಲೇ ಬರೆದುಕೊಳ್ತಾನೆ.
Laxman Hoogar: sampattigoskar akramavagi nela, jala, kaadu kadiyoru nijavada deshdrohigalu. aadru eega avre deshada aasti aagiddare! ade ee deshada duranta. konegu binayak senge bail sikkide. heegagi sedition law reform agbeku.
ನಿಮಗೆ ಗೊತ್ತಿಲ್ಲದ ಮತ್ತೊಂದು ವಿಷಯ ಹೇಳ್ತೀವಿ ಕೇಳಿ. ಈತ ಕೂಡಾ ಒಂದು ರೀತಿ ರಂಗ'ನಾಥ' ಭಾರಧ್ವಾಜ ಟೈಪ್ ಪತ್ರಕರ್ತ. ಆತನಂತೆ ಈತನೂ ಕಂಡ ಕಂಡವರಿಗೆ ಅಪ್ಪಾಜಿ ಎನ್ನುತ್ತಾನೆ. ಇವರಲ್ಲಿ ಈತನ ನಿಜವಾದ ಅಪ್ಪಾಜಿ ಸಾಕ್ಷಾತ್ ದೇವೇಗೌಡರು! ನಿಮಗೆ ಗೊತ್ತಿರಲಿ! ದೇವೇಗೌಡರು ಎದುರಾದರೆ ತಾನು ಪತ್ರಕರ್ತ ಎಂಬುದನ್ನೂ ಮರೆತು ಧಡಕ್ಕನೆ  'ಅಪ್ಪಾಜಿ ಹೇಗಿದ್ದೀರಿ'? ಅರಾಮ ಇದ್ದೀರಾ? ಎಂದು ಅವರ ಕಾಲಿಗೆ ಬಿದ್ದು ಬಿಡುತ್ತಾನೆ. ಅದೇ ರಾಜ್ಯದ ಮುಖ್ಯಮಂತ್ರಿಗಳನ್ನು ಈತ ಕರೆಯೋದೇ 'ಯಡ್ಡಿ' ಅಂತ! ಬೇಕಿದ್ರೆ ಸಾಕ್ಷಿ ಇಲ್ಲಿದೆ ನೋಡಿ...
Laxman Hoogar: bjp sarkar matte birugaalige sikkide. govrner kendrakke kalisida report sarkarvannu ulisutta? illa alisutta anno yaksha prashne yeddide. idakke yaaru hone? yaddina illa bhardwaja? antu raajya suffer aagodu maatra tappilla.
ಒಂದು ಪಕ್ಷದವರನ್ನು ಅಪ್ಪಾಜಿ ಎಂದು ಕಾಲಿಗೆ ಬೀಳುವ, ಮತ್ತೊಂದು ಪಕ್ಷದವರಿಗೆ ಕನಿಷ್ಠ ಗೌರವವನ್ನೂ ಕೊಡದ ಇಂಥಹ ಹೀನ ವ್ಯಕ್ತಿತ್ವದ ಪತ್ರಕರ್ತ ಬಿಜೆಪಿಯನ್ನು ದಿನ ಬೆಳಗಾದರೆ ವಿರೋಧಿಸದೇ ಬೇರೇನು ಮಾಡಿಯಾನು?
ಇನ್ನೂ ಒಂದು ವಿಷಯ 2008 ರ ವಿಧಾನಸಭೆ ಚುನಾವಣೆಯಲ್ಲಿ ಸಖತ್ತಾಗಿ ಹರಿದಾಡ್ತಿತ್ತು. ಅದೇನೆಂದರೆ ಸುವರ್ಣದ ಹಮೀದ್  ಹಾಗೂ ಲಕ್ಷ್ಮಣ್ ಇಬ್ಬರೂ ಜೆಡಿಎಸ್ ನಿಂದ ಚುನಾವಣೆಗೆ ನಿಲ್ತಾರೆ ಎಂಬುದು! ಅದಾದ ನಂತರ ಈಗಲೂ ಜೆಡಿಎಸ್ ಅಂತರಂಗದಲ್ಲಿ ಹೊಕ್ಕಾಡುವವರಿಗೆ ಈ ವಿಷಯ ಗೊತ್ತಿದೆ. ಸ್ವತ: ಕುಮಾರಸ್ವಾಮಿಯವರೇ ಕೆಲ ಹಿರಿಯ ಪತ್ರಕರ್ತರ ಮುಂದೆ ಈ ರೀತಿಯ ಒಂದು ಅನಿಸಿಕೆ ವ್ಯಕ್ತ ಪಡಿಸಿದ್ದು ಸಹ ಅಷ್ಟೇ ಸತ್ಯ.
ಇಂತಹ ಆಸೆ ಇಟ್ಟುಕೊಂಡಿರುವ ಮನುಷ್ಯ ದಿನ ಬೆಳಗಾದರೆ ಬಿಜೆಪಿ ವಿರುದ್ಧ ಅಸಂಬಧ್ದ ಪ್ರಲಾಪ ಮಾಡದೇ ಇನ್ನೇನು ಮಾಡಿಯಾನು?
11 ಜನ ಶಾಸಕರು, ಸುಪ್ರಿಂ ಕೋರ್ಟ್ ಆದೇಶದ ನಂತರ ಮತ್ತೆ ಬಿಜೆಪಿಯಲ್ಲೇ ಇಳಿಯುವ ನಿರ್ದಾರ ಮಾಡಿದ್ದರು. ಅದಕ್ಕೆ ಕಾರಣ ಕುಮಾರಸ್ವಾಮಿಯನ್ನು ನಂಬಿಕೊಂಡ ಹೋಗಿದ್ದ ಅವರಿಗೆ ಕಳೆದ 8 ತಿಂಗಳಲ್ಲಿ ಕುಮಾರಸ್ವಾಮಿಯ ಅಸಲಿಯತ್ತು ಪರಿಚಯವಾಗಿತ್ತು. ಹೀಗಾಗಿ ಬಿಜೆಪಿಯಲ್ಲೇ ಉಳಿದರು. ಆದರೆ ಇದನ್ನು ಕಂಡು, ಕಾಂಗ್ರೆಸ್, ಜೆಡಿಎಸ್ ನ ಕುಮಾರಸ್ವಾಮಿಗಿಂತ ಹೆಚ್ಚು ಕುದ್ದು ಹೋಗಿದ್ದು ಲಕ್ಷ್ಮಣ್ ಹೂಗಾರ್ ಎಂಬ ಈ ಮಹಾಶಯ! ಈಗ ಈತ ಯಾವ ರೀತಿ ಗಾಂಧಾರಿಯಂತೆ ತನ್ನ ಹೊಟ್ಟೆಯನ್ನು ತಾನೇ ಗುದ್ದಿಕೊಂಡು ವಿಷಯ ಕಾರಿಕೊಂಡಿದ್ದ ನೋಡಿ...
Laxman Hoogar: kshamisi, bjpya bhinna shashakarnnu (mlas) maanavantharu anth kareyonva? democracyge avaman madta hogore eega hecchu bele baalo jana !! Sunday at 13:17
ಇಷ್ಟು ಸಂಕಟ ಪಡೋ ಈ ಮಹಾಶಯ, ಅದೇ ಕುಮಾರಸ್ವಾಮಿ ಬಿಜೆಪಿ ಶಾಸಕರನ್ನು ಹೈಜಾಕ್ ಮಾಡಿ ಕೊಂಡು ಹೋದಾಗ ಅದು ಹಾದರ ಅನ್ನಿಸಲೇ ಇಲ್ಲ! ಅದು ಡೆಮಾಕ್ರಸಿಗೆ ಅಪಮಾನ ಅನ್ನಿಸಲೇ ಇಲ್ಲ. ಅದು ಮಾನವಿಲ್ಲದವರು ಮಾಡೋ ಕೆಲಸ ಅನ್ನಿಸಲೇ ಇಲ್ಲ. ಇದೇ ಕುಮಾರಸ್ವಾಮಿ, ದೇವೇಗೌಡರು ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದಾಗ ಈ ಮಹಾಶಯನಿಗೆ ಅದೂ ಸಹ ಡೆಮಾಕ್ರಸಿಗೆ ಅಪಮಾನ ಅನ್ನಿಸಲೇ ಇಲ್ಲ. ಅದು ಮಾನವಿಲ್ಲದವರು ಮಾಡೋ ಕೆಲಸ ಅನ್ನಿಸಲೇ ಇಲ್ಲ. ಈಗ ಗವರ್ನರ್ ಡೆಮಾಕ್ರಸಿಅಡಿಯಲ್ಲೇ ಆಯ್ಕೆಯಾಗಿರುವ ಬಿಜೆಪಿ ಸರಕಾರವನ್ನು ಕಿತ್ತು ಒಗೆಯಲು ಮುಂದಾಗಿರುವುದೂ ಸಹ ಡೆಮಾಕ್ರಸಿಗೆ ಅಪಮಾನ ಅನ್ನಿಸಲೇ ಇಲ್ಲ. ದು ಮಾನವಿಲ್ಲದವರು ಮಾಡೋ ಕೆಲಸ ಅನ್ನಿಸಲೇ ಇಲ್ಲ. ಕೊನೇ ಪಕ್ಷ ಗವರ್ನರ್ ಅವರನ್ನು ವಿರೋಧಿಸುವಂತಹ ಒಂದೇ ಒಂದು ಮಾತು ಈತನ ಹೊಲಸು ಬಾಯಿಯಿಂದ ಬರಲೇ ಇಲ್ಲ. ಈತನಿಗೇಗೆ ಬಿಜೆಪಿ ಶಾಸಕರು ಬಿಜೆಪಿಯಲ್ಲೇ ಉಳಿದರೆ ಹೊಟ್ಟೆಕಿಚ್ಚು? ಬಿಜೆಪಿ ಸರಕಾರ ಪತನವಾಗದೇ ಉಳಿದುಕೊಂಡು ಬಿಟ್ಟಿತು. ತನ್ನ ತಂದೆ ದೇವೇಗೌಡರ ಪಾರ್ಟಿ ಅಧಿಕಾರದಿಂದ ವಂಚಿತವಾಗುತ್ತಿದೆ ಎಂಬ ಪ್ರಲಾಪವಲ್ಲದೇ ಬೇರೇನೂ ಅಲ್ಲ.
ಇನ್ನೂ ಮುಂದುವರೆದು ಈತ ಬರೀತಾನೆ...
karnatakadalli matte raajakeeya tamaasha shuru aagide. bayidavarenna bandhugalembenu yendu cm yadiyurappa eega 11 jana bhinna shashakarannu nammavare anta oppikondidare. heegagi vote needida voter maatra dikkettu hogidane. karnatakada raajakaranakke kappu masi. Saturday at 13:49
ಆದರೆ ಈ ಮಹಾಶಯನಿಗೆ ಅದೇ ಮತದಾರರು ವೋಟ್ ಮಾಡಿ ಅಧಿಖಾರಕ್ಕೆ ತಂದ ಬಿಜೆಪಿಯನ್ನು ಅಧಿಕಾರದಿಂದ ಉರುಳಿಸಲು ಯತ್ನಿಸಿದ ಕುಮಾರಸ್ವಾಮಿ, ಸಿದ್ಧರಾಮಯ್ಯ, ದೇವೇಗೌಡರ ಪ್ರಯತ್ನಗಳು ಕರ್ನಾಟಕದ ರಾಜಕಾರಣಕ್ಕೆ ಕಪ್ಪು ಚುಕ್ಕೆಯಾಗಿ ಕಾಣುವುದೇ ಇಲ್ಲ. ಎಷ್ಟೇ ಅಂದರೂ ಜನುಮದಾತ ಅಪ್ಪಾಜಿಯ ಪಕ್ಷವಲ್ಲವೇ?
ಈತ ಯಾವ ಜಾತಿ ಎಂದು ನಮಗೆ ಗೊತ್ತಿಲ್ಲ. ಆದರೆ ಈತನಿಗೆ ಲಿಂಗಾಯತರನ್ನು ಕಂಡರೆ ಭಯಂಕರ ಸಿಟ್ಟು. ಯಾರಾದರೂ ಲಿಂಗಾಯತರನ್ನು ಹೊಗಳಿದರೆ, ಈತನ ನೆತ್ತಿಗೇ ಕೋಪ ಅಡರುತ್ತದೆ. ಒಮ್ಮೆ ದಲಿತ ಕವಿ ಸಿದ್ದಲಿಂಗಯ್ಯ ಯಡಿಯೂರಪ್ಪ ಅವರನ್ನು ಆಧುನಿಕ ಬಸವಣ್ಣ ಎಂದಿದ್ದರು. ಅದಕ್ಕೆ ಈ ಮಹಾಶಯ ದಲಿತ ಕವಿ ಸಿದ್ದಲಿಂಗಯ್ಯ ಮಾಡಬಾರದ ಅಪರಾಧ ಮಾಡಿದ್ದಾರೆ. ಅವರು ಸಮಯ ಸಾಧಕ ಎಂದು ಬರೆದುಕೊಂಡಿದ್ದ.
ಇನ್ನು ಈತ ವರದಿಗಾರಿಕೆ ಹೆಸರಲ್ಲಿ ಮಾಡುವ ಹೇಸಿಗೆತನ ಬಯಲಾಗಿಲ್ಲ ಎಂದೇನೂ ಇಲ್ಲ. ಎಚ್.ವಿಶ್ವನಾಥ್ ಹಳ್ಳಿ ಹಕ್ಕಿಯ ಹಾಡು ಪುಸ್ತಕ ಬರೆದಾಗ, ಅದನ್ನು ಮಿಡ್ ಡೇ ಮೊದಲು ವರದಿ ಮಾಡಿತ್ತು. ಮಿಡ್ ವರದಿಯನ್ನೇ ಇಟ್ಟುಕೊಂಡು, ಲಕ್ಷ್ಮಣ್ ಹೂಗಾರ್ ಅಕ್ಷರಷ: ಹಾದರಕ್ಕಿಳಿದುಬಿಟ್ಟಿದ್ದ. ಅದನ್ನು ಟಿವಿ9 ಮೂಲಕ ದೊಡ್ಡ ವಿವಾದವಾಗುವಂತೆ ನೋಡಿಕೊಂಡ. ಈತ ಮಾಡಿದ ಭಾನಗಡಿಗಳ ಬಗ್ಗೆ ಅನೇಕರು ಪ್ರಶ್ನೆಗಳನ್ನು ಎತ್ತಿದ್ದರು. ಅದರಲ್ಲಿ ಚುರುಮುರಿ ಕೂಡಾ ಒಂದು. ಚುರುಮುರಿಯಲ್ಲಿ ಹೂಗಾರ್ಡ್ ಗೆ ನೀರಿಳಿಸಿದ ಲೇಖನದ ಲಿಂಕ್ ಇಲ್ಲಿ ನೀಡಿದ್ದೇವೆ.
ಇದರಲ್ಲಿ ಒಂದು ಕಾಮೆಂಟ್ ಹೀಗಿದೆ...
4. What was the rationale behind sensationalising such small issue for hours together. This news could have been shown in a proper way in just about 1 minute duration. What was the need to “hoogaar” (telling/ screaming/ repeating) it again and again?
ಇತರೆ ಪೇಜ್ ಗಳು ಇಂದಿಗೂ ಲಭ್ಯ ಇವೆ. ಅವುಗಳ ಲಿಂಕ್ ಇಲ್ಲಿ ಕೊಡಲಾಗಿದೆ.
 ಇದನ್ನೆಲ್ಲಾ ನೋಡಿಯೇ ಓದುಗರೊಬ್ಬರು ಲಕ್ಷ್ಮಣ್ ಹೂಗಾರ್ ಕಾರ್ಯಕ್ರಮ  ನೋಡಿದರೆ ನಾವು ಸಿಕ್ ಆಗ್ತೀವಿ. ತುಂಬಾ ಇರಿಟೇಟಿಂಗ್ ಎಂದು ಬರದ್ದಿದ್ದಾರೆ. ನೋಡಿ..
guys u are correct, we need to ignore speeches of kumara & more over TV9 lakshman hoogar is an irritation person, who makes audions to get sick of watching him
ಇದರ ಲಿಂಕ್ ಇಲ್ಲಿದೆ
ಇನ್ನು ಹೂಗಾರ್ ಯಾವಾಗಲೇ ಟಿವಿಯಲ್ಲಿ ಮಾತನಾಡಲಿ, ಈ ಕೆಳಗಿನ ಮಾತುಗಳು ಖಂಡಿತಾ ಬರುತ್ತವೆ. ಬೇಕಿದ್ದರೆ ಇಂದಿನಿಂದಲೇ ಗಮನಿಸಿ..
1. ನಾನು ಮೊದಲೇ ಹೇಳಿದ್ದೇ (ಆತ್ಮರತಿ)
2. ನಾನು ಬಹಳ ಹಿಂದೆ ಕುಡಾ ಈ ಬಗ್ಗೆ ಹೇಳಿದ್ದೆ (ಆತ್ಮರತಿಯ ಪರಾಕಾಷ್ಠೆ)
3. ಈ ಬಗ್ಗೆ ನಾನು ಹೇಳೋದೇನಪ್ಪ ಅಂದ್ರೆ (ನಿನ್ನ ಒಪೀನಿಯನ್ ಯಾರಿಗೆ ಬೇಕು? ಮುಚ್ಕೊಂಡು ಪತ್ರಕರ್ತನ ಕೆಲಸ ಮಾಡು)
4. ಈ ಚೆಂಡು ರಾಜ್ಯಪಾಲರ ಅಂಗಳದಲ್ಲಿದೆ, ಚೆಂಡು ಕೇಂದ್ರ ಸರಕಾರದ ಅಂಗಳದಲ್ಲಿದೆ...(ಹೇಳಿದ್ದನ್ನೆ 2007 ರಿಂದಲೂ ಹೇಳಿ ತಲೆ ತಿನ್ನಬೇಡ ಮಾರಾಯಾ)
5. ರಾಜಕಾರಣದಲ್ಲಿ 2+2 ಯಾವಾಗಲೂ ಫೋರ್ ಆಗೋಲ್ಲ. 2+2 = 5 ಕೂಡಾ ಆಗಬಹುದು. ಮೂರು ಬೇಕಿದ್ರೂ ಆಗಬಹುದು. (ರಾಜಕೀಯ ಬೆಳವಣಿಗೆಯಾದಾಗಲೆಲ್ಲಾ ಇದು ಕಾಮನ್.)
6. ಇದಕ್ಕೆ ಆಡಳಿತ ಪಕ್ಷವಾಗಿ ಬಿಜೆಪಿ ಹೆಚ್ಚು ಉತ್ತರ ಕೊಡಬೇಕಾಗುತ್ತದೆ (ಹೌದು ಉತ್ತರ ಕೊಡಲು ಬಿಜೆಪಿ, ಕಾಲಿಗೆ ಬೀಳಲು ಜೆಡಿಎಸ್)
7. ಇತಿಹಾಸದ ಪುಟಗಳನ್ನು ಸೇರಿದೆ. (ಜೆಡಿಎಸ್, ಕಾಂಗ್ರೆಸ್ ಮಾಡಿದ ತಪ್ಪುಗಳನ್ನು ಈತ ಯಾವಾಗಲೂ ಇತಿಹಾಸದ ಪುಟ ಸೇರಿಸ್ತಾನೆ. ಬಿಜೆಪಿ ಆದ್ರೆ, ನೂರು ವರ್ಷವಾದರೂ ಅವು ಪ್ರಸ್ತುತ ಅಂತಾನೆ.)
ಇಷ್ಟೆಲ್ಲಾ ಆದ ನಂತರವೂ ಟಿವಿ9 ನವರು ಅದೇನು ಮಣ್ಣು ತಿಂತಿದ್ದಾರೋ ಗೊತ್ತಿಲ್ಲ. ರವಿಕುಮಾರ್ ಗೆ ರಿಪೋರ್ಟರ್ ಗಳು ಒಟ್ಟು ಮಾತನಾಡಿದರೆ ಸಾಕು. ಏನು ಮಾತನಾಡಿದರು ಎಂದು ಆತನಿಗೆ ಅರ್ಥ ಆಗೋಲ್ಲ. ಮಾರುತಿಗೆ ಅರ್ಥವಾದರೂ ಹೇಳಲು ಹೋಗದ ಜಾಣ. ಇನ್ನು ಶಿವಪ್ರಸಾದ್ ಗೆ ಲಕ್ಷ್ಮಣ್ ಹೂಗಾರ್ ಹೆಚ್ಚು ತಪ್ಪು ಮಾಡಿದಷ್ಟು ಹೆಚ್ಚು ಖುಷಿ. ಮಹೇಂದ್ರ ಮಿಶ್ರಾಗೆ ಕನ್ನಡವೇ ಅರ್ಥವಾಗೋಲ್ಲ! ಇಂತಹ ಪರಿಸ್ಥಿತಿಯಲ್ಲಿ ಹೂಗಾರ್ ಮಾತನಾಡಿದ್ದೇ ರಾಜಕೀಯ. ಆತ  ಮಾಡಿದ್ದೇ ಪೊಲಿಟಿಕಲ್ ಅನಾಲಿಸಿಸ್. ಆತ ಹೇಳಿದ್ದೇ ವೇದವಾಕ್ಯ. ಆತ ಹೇಳಿದ್ದೇ ಫೈನಲ್. ಆತ ಹೇಳಿದಂತೆ ಬಿಜೆಪಿಯವರು ಕೇಳಬೇಕು. ಆತ ಕೇಳಿದ ಪ್ರಶ್ನೆಗಳಿಗೆ ಮುಚ್ಚಿಕೊಂಡು ಉತ್ತರ ಕೊಡಬೇಕು. ಇಲ್ಲದಿದ್ದರೆ ತಾನೂ ಪತ್ರಕರ್ತ ಎಂಬುದನ್ನೂ, ಉಳಿದ ಮೂರನ್ನೂ ಬಿಟ್ಟು ನೇರವಾಗಿ ವೀಕ್ಷಕರಿಗೆ ಹೇಸಿಗೆಯಾಗುವಂತೆ ಜಗಳಕ್ಕಿಳಿಯುತ್ತಾನೆ.
ಹೂಗಾರ್, ಇನ್ನಾದರೂ ನೀನು ಕೇವಲ ಪತ್ರಕರ್ತ, ಸೃಷ್ಠಿಕರ್ತನಲ್ಲ ಎಂಬ ಪರಿಜ್ಞಾನ ಇರಲಿ.
ಇದುವರೆಗೂ ಈತನನ್ನು ಯಾರೂ ಪ್ರಶ್ನೆ ಮಾಡಿರಲಿಲ್ಲ. ಈಗ ನಾವು ಮಾಡಿದ್ದೇವೆ. ಯಾರಾದರೂ ಪುಣ್ಯಾತ್ಮರು ಇದನ್ನು ಅನುವಾದ ಮಾಡಿ, ಮಹೇಂದ್ರ ಮಿಶ್ರಾಗೆ ಈ ಮೇಲ್ ಐಡಿಗೆ ಕಳುಹಿಸಿದರೆ ನಾವು ಧನ್ಯರು! ಹಾಗೇ ಮಿಶ್ರಾ ಅವರ ನಂಬರ್ 9980366999, 9980510144, 9880104897 ಇವುಗಳಿಗೆ ಎಸ್.ಎಂ.ಎಸ್.ಹಾಕಿ.

Thursday, May 5, 2011

ರವಿ ಬೆಳಗೆರೆಯನ್ನು ಜನಶ್ರೀಯಿಂದ ಕಿತ್ತು ಹಾಕಿದ್ದಾರಾ?


Ravi Belagere:
Hi all
I joined JANASHREE news channel today and will be hosting a daily show late evening. Need your support and best wishes. I will also host a morning breakfast programme show which will be unique.
ಇದು ರವಿ ಬೆಳಗೆರೆ ದಿನಾಂಕ 03 February, 2011 ರಂದು ಸಮಯ  23:54ಕ್ಕೆ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಹಾಕಿಕೊಂಡ ಸ್ಟೇಟಸ್. ಇದರಲ್ಲಿ ರವಿ ಬೆಳಗೆರೆ ಮೂರು ಅಂಶ ಪ್ರಸ್ತಾಪಿಸಿದ್ದಾರೆ.
1. ಜನಶ್ರೀ ಚಾನೆಲ್ ಸೇರಿದ್ದೇನೆ
2. ನಿತ್ಯ ಸಂಜೆ ಒಂದು ವಿಶೇಷ ಕಾರ್ಯಕ್ರಮ ನಡೆಸಿಕೊಡುತ್ತೇನೆ
3. ನಿತ್ಯ ಬೆಳಿಗ್ಗೆ ತುಂಬಾ ಭಿನ್ನವಾಗಿರುವ ಮತ್ತೊಂದು ಬ್ರೇಕ್ ಫಾಸ್ಟ್ ಶೋ ನಡೆಸಿಕೊಡುತ್ತೇನೆ.
ಆದರೆ ಈಗ ಮೂರು ತಿಂಗಳ ನಂತರ ಆಗಿರುವುದೇನು?
ಅತ್ತ ಬೆಳಗಿನ ಬ್ರೇಕ್ ಫಾಸ್ಟ್ ಶೋ ನೂ ಇಲ್ಲ… ಲೇಟ್ ಈವನಿಂಗ್ ನಡೆಸಿಕೊಡ್ತೀನಿ ಅಂತ ಹೇಳಿದ್ದ  ಪ್ರೋಗ್ರಾಂ ಕೂಡಾ ಇಲ್ಲ. (ಯಾವ ಪ್ರೋಗ್ರಾಂ ಅಂತ ನೀವೇ ‘ಕೇಳಿ’).
ಇಲ್ಲಿ ಮೂರು ಸಾಧ್ಯತೆಗಳಿವೆ.
1. ರವಿ ಬೆಳಗೆರೆಯನ್ನು ಜನಶ್ರೀಯಿಂದ ಕಿತ್ತು ಹಾಕಿದ್ದಾರೆ.
2. ರವಿ ಬೆಳಗೆರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
3. ರೆಡ್ಡಿ ಬ್ರದರ್ಸ್ ಜೊತೆ ಅವರ ಸಂಬಂಧ ಹಳಸಿದೆ.
ಇದೆಲ್ಲಾ ರವಿ ಬೆಳಗೆರೆ ವರ್ತನೆಯಿಂದಲೇ ಬರುತ್ತಿರುವ ಅನುಮಾನಗಳು. ಏಕೆಂದರೆ ಅವರು ಫೇಸ್ ಬುಕ್   ನಲ್ಲಿ ಬರೆದುಕೊಂಡಿದ್ದಂತೆ ಜನಶ್ರೀ ಸೇರಿದ್ದೇ ಆಗಿದ್ದಲ್ಲಿ, ಅವರ ಕಾರ್ಯಕ್ರಮಗಳು ಆರಂಭವಾಗಬೇಕಿದ್ದವು. ಜನಶ್ರೀ ಕಚೇರಿಗೆ ಹೋಗಿ ಉಸ್ತುವಾರಿ ನೋಡಿಕೊಳ್ಳಬೇಕಿತ್ತು. ಆದರೆ ಅದಾವುದೂ ಆಗಿಲ್ಲ. ರವಿ ಒಂದು ದಿನವೂ ಜನಶ್ರೀ ಮುಖ್ಯಸ್ಥನಂತೆ ವರ್ತಿಸಲೇ ಇಲ್ಲ.
ಇದಕ್ಕೆ ಮತ್ತೊಂದು ಸಾಕ್ಷಿ ಎಂದರೆ ಒಸಾಮಾ ಬಿನ್ ಲಾಡೆನ್ ಹತ್ಯೆಯಾದಾಗ ರವಿ ಬೆಳೆಗೆರೆ ನಡೆದುಕೊಂಡ ರೀತಿ! ನಿಜಕ್ಕೂ ರವಿ ಬೆಳಗೆರೆ ಜನಶ್ರೀ ಜೊತೆ ಸಂಬಂಧ ಇದ್ದರೆ, ಜನಶ್ರೀ ಉಸ್ತುವಾರಿ ವಹಿಸಿಕೊಂಡಿದ್ದರೆ ಅವತ್ತು ಜನಶ್ರೀಯಲ್ಲಿ ಕಾರ್ಯಕ್ರಮ ನಡೆಸಿಕೊಡಬೇಕಿತ್ತು. ಆದರೆ ರವಿ ಕಾಣಿಸಿಕೊಂಡದ್ದು ಸುವರ್ಣ ಟೀವಿಯಲ್ಲಿ. ತಾವೇ ಮುಖ್ಯಸ್ಥರಾಗಿರುವ ಚಾನೆಲ್ ಬಿಟ್ಟು ರವಿ ಏಕೆ ಬೇರೆ ಚಾನೆಲ್ ನಲ್ಲಿ ಕಾಣಿಸಿಕೊಂಡರೋ? ಇಲ್ಲೂ ಎರಡು ಮೂರು ಸಾಧ್ಯತೆಗಳಿವೆ.
1. ಟಿವಿ9 ರವಿಯನ್ನು ಹತ್ತಿರಕ್ಕೂ ಸೇರಿಸುವುದಿಲ್ಲ. ರವಿಯ ಮನೋಭಾವ, ಗುಣ ಎಲ್ಲವೂ ಟಿವಿ9 ನಲ್ಲಿ ಇರುವವರಿಗೆ ಚಿರಪರಿಚಿತ. ರವಿ ಏನೇ ಭಾಷಣ ಹೊಡೆದರೂ ಅದೆಲ್ಲಾ ಸುಳ್ಳೇ ಸುಳ್ಳು ಎಂದು ಎಲ್ಲರಿಗೂ ಗೊತ್ತು.
2. ಜನಶ್ರೀಗೆ ಹೋದರೆ ಅದನ್ನು ನೋಡುವವರೇ ಇಲ್ಲ. ರವಿ ಬೆಳಗೆರೆ ಅಲ್ಲಿ ಇದ್ದಾರೋ ಇಲ್ಲವೋ ಯಾರಿಗೂ ಗೊತ್ತಿಲ್ಲ. ರವಿ ಬೆಳಗೆರೆಯನ್ನು ಕಿತ್ತು ಹಾಕಿದ್ದಾರೋ, ಅಥವಾ ರವೀನೇ ರಾಜೀನಾಮೆ ನೀಡಿದ್ದಾರೋ ಎಂಬುದೂ ತಿಳಿದಿಲ್ಲ.
3. ಇನ್ನು ಹಾಳು ಊರಿಗೆ ಉಳಿದವನೇ ಗೌಡ ಎಂಬಂತೆ ಇರುವುದು ಸುವರ್ಣ! ಅದೇನೋ ಅನ್ನ ಹಳಸಿತ್ತು, ನಾಯಿ ಹಸಿದಿತ್ತು ಗಾದೆ ಇದೆಯಲ್ಲ, ಆ ಪರಿಸ್ಥಿತಿ. ದಿನೇದಿನೇ ಸುವರ್ಣದ ಟಿಆರ್ಪಿ ಕುಸಿಯುತ್ತಿದೆ. ನಾನೇ ಚೀಫ್ ಎಂಬ ಭ್ರಮೆಯಲ್ಲಿರುವ ಹಮೀದ್ ಹೈರಾಣಾಗಿ ತಮ್ಮ ಕುರ್ಚಿಗೇ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಹೀಗಾಗಿ ಅವರಿಗೂ ಏನೋ ಮಾಡಿದ್ದೇನೆ ಎಂದು ತೋರಿಸಿಕೊಳ್ಳುವ ಉಮೇದಿ ಇತ್ತು. ರವಿ ಬೆಳಗೆರೆಗೂ ಆ ಕ್ಷಣಕ್ಕೆ ಒಂದು ಚಾನೆಲ್ ನಲ್ಲಿ ಮುಖ ತೋರಿಸಬೇಕಿತ್ತು. ಎರಡೂ ಈಡೇರಿದವು.
ಆದರೆ ಅಸಲಿ ಸಂಗತಿ ಎಂದರೆ ರವಿ ಬೆಳಗೆರೆ ಜನಶ್ರೀ ಚಾನೆಲ್ ಸೇರಿಯೇ ಇಲ್ಲ! ಬಂದು ಸೇರಿಕೊಳ್ಳಿ ಎಂದು ಯಾರೂ ಅವರನ್ನು ಕರೆದೂ ಇಲ್ಲ. ಜನಶ್ರೀ ಸೇರಿದ್ದೇನೆ ಎಂದು ಫೇಸ್ ಬುಕ್ ನಲ್ಲಿ ಹಾಕಿಕೊಳ್ಳುವ ಹೊತ್ತಿಗೆ ರವಿ ಬೆಳಗೆರೆ - ವಿಶ್ವೇಶ್ವರ ಭಟ್ಟರು ಹಾಗೂ ಅವರ ಪ್ಯಾರಾಸೈಟ್ ಗಳ ವಿರುದ್ಧ ಬೀದಿ ಜಗಳಕ್ಕೆ ಬಿದ್ದಿದ್ದರು. ರವಿ ಬೆಳಗೆರೆಯ ಎರಡನೇ ಅನಧಿಕೃತ ಪತ್ನಿ ಯಶೋಮತಿ, ಪುತ್ರ ರತ್ನ ಹಿಮವಂತ್, ರವಿ ಬೆಳಗೆರೆ ಮಹಿಳೆಯರಿಗೆ ಬರೆದ ಪ್ರೇಮ ಪತ್ರಗಳನ್ನು ಪ್ರತಾಪ್ ಸಿಂಹ ಎಕ್ಸ್ಪೋಸ್ ಮಾಡುತ್ತಿದ್ದರು. ಇದೆಲ್ಲದರಿಂದ ನಾನು ಡಿಸ್ಟರ್ಬ ಆಗಿಲ್ಲ. ನಾನು ಯಶಸ್ಸಿನ ಶಿಖರ ಏರುತ್ತಿದ್ದೇನೆ ಎಂದು ತೋರಿಸಿಕೊಳ್ಳಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲರ ಗಮನ ಬೇರೆ ಕಡೆ ಸೆಳೆದು, ಸುದ್ದಿ ಮಾಡಬೇಕಿತ್ತು. ಬೋ ಪರಾಕ್ ಎನಿಸಿಕೊಳ್ಳಬೇಕಿತ್ತು. ಹೀಗಾಗಿ ನಾನು ಜನಶ್ರೀ ಸೇರಿದ್ದೇನೆ ಎಂದು ಬರೆದುಕೊಂಡಿದ್ದು. 
ನಿಜ ಹೇಳಬೇಕೆಂದರೆ, ಕುಡಿತ ಸಿಗರೇಟ್ ಗಳಿಂದ ಆರೋಗ್ಯ ಹಾಳು ಮಾಡಿಕೊಂಡು ಹೈರಾಣಾಗಿರುವ ಬೆಳಗೆರೆಗೆ ನಿಜಕ್ಕೂ ಒಂದು ಚಾನೆಲ್ಲಿಗೋಸ್ಕರ ನಿಂತು ಬಡಿದಾಡುವ ಶಕ್ತಿ ಇಲ್ಲ. ಅವರೇ ಕಟ್ಟಿಕೊಂಡ ಹಾಯ್ ಬೆಂಗಳೂರು ಎಂಬ ಕೋಟೆ ಕುಸಿದು ಹೋಗುತ್ತಿದೆ. ಸಕ್ಯರ್ೂಲೇಷನ್ ಪಾತಾಳಕ್ಕೆ ಕುಸಿದಿದೆ. ಏನೇ ಕಸರತ್ತು, ಗಿಮಿಕ್ ಮಾಡಿದರೂ ಸಕ್ಯರ್ೂಲೇಷನ್ ಏರುತ್ತಿಲ್ಲ. ರವಿ ಬೆಳಗೆರೆ ಮ್ಯಾಜಿಕ್ ಕಡಿಮೆಯಾಗುತ್ತಿದೆ. ಮೇಲಾಗಿ ರವಿ ಬೆಳಗೆರೆ ಬಗ್ಗೆ ಇದ್ದ ಭಾವನೆಯೂ ಈಗ ಜನರಲ್ಲಿ ಬದಲಾಗಿದೆ. ಮೊದಲಿನಷ್ಟು ಆಪ್ತ ಭಾವದಿಂದ ಹಾಯ್ ಬೆಂಗಳೂರು ಓದುವ ಓದುಗ ದೊರೆಗಳು ಈಗಿಲ್ಲ. ಹೀಗಾಗಿ ರವಿ ಬೆಳಗೆರೆಗೆ ತಾವು ಏರಿ ಕೂತ ಹುಲಿಯನ್ನೇ ಸಂಭಾಳಿಸಿಕೊಂಡರೆ ಸಾಕು ಎನ್ನುವಂತಾಗಿದೆ. ಇನ್ನು ಜನಶ್ರೀ ಉಸ್ತುವಾರಿ ಹೇಗೆ ಹೊತ್ತುಕೊಂಡಾರು?
ಇದು ಸುಳ್ಳು ಎಂದಾದರೆ ದಯವಿಟ್ಟು ರವಿ ಬೆಳಗೆರೆ ಜನಶ್ರೀ ಸೇರಲು ತಮಗೆ ಬಂದ ಆಫರ್ ಲೆಟರ್ ಪ್ರಕಟಿಸಲಿ. ಜನಶ್ರೀಯಲ್ಲಿ ರಿಪೋರ್ಟರ್, ಆಂಕರ್, ಡೆಸ್ಕ್ ಚೀಫ್ ಹೀಗೆ ಏನು ಆಗಿ ಡ್ಯೂಟಿ ರಿಪೋರ್ಟ್ ಮಾಡಿಕೊಂಡಿದ್ದಾರೆ ಎಂದಾದರೂ ತಿಳಿಸಲಿ. ಆಗ ನಾವು ಬರೆದದ್ದು ಸುಳ್ಳು ಎಂದು ಈ ಪೋಸ್ಟ್ ತೆಗೆದುಬಿಡುತ್ತೇವೆ.


 

Wednesday, May 4, 2011

ಕನ್ನಡ ಮೀಡಿಯಾ ಕಣ್ಣಲ್ಲಿ ಒಸಮಾ ಹತ್ಯೆ

ಒಸಾಮಾ ಬಿನ್ ಲಾಡೆನ್ ಹತ್ಯೆ ಕನ್ನಡ ಮೀಡಿಯಾದಲ್ಲಿ ಜಬರ್ದಸ್ತಾಗಿಯೇ ಕವರ್ ಆಗಿದೆ.
ಕನ್ನಡ ದಿನ ಪತ್ರಿಕೆಗಳ ವಿಷಯಕ್ಕೆ ಬಂದರೆ ಈ ಈವೆಂಟ್ ಅನ್ನು ಸಮರ್ಥವಾಗಿ, ವಿಭಿನ್ನವಾಗಿ ಪ್ರಸ್ತುತ ಪಡಿಸಿದ್ದು ವಿಜಯ ಕರ್ನಾಟಕ. ತನ್ನ ಮಾಸ್ಟ್ ಹೆಡ್ ಗೂ ಮೇಲೆ ಒಸಾಮಾಸುರ ಸಂಹಾರ ಎಂದು ಬರೆಯುವ ಮೂಲಕ ಮುಖಪುಟದ ವಿನ್ಯಾಸದಲ್ಲಿ ಬದಲಾವಣೆ ಮಾಡಿ, ಒಸಾಮಾ ಸುದ್ದಿಗೆ ಪ್ರಾಮುಖ್ಯತೆ ನೀಡಿತ್ತು. ಉತ್ತಮ ಗ್ರಾಫಿಕ್ಸ್ ಮಾಡಿಸಿದ್ದರೂ, ಅದನ್ನು 7ನೇ ಪುಟದಲ್ಲಿ ಹಾಕುವ ಮೂಲಕ ಅದರ ಮಹತ್ವವನ್ನೇ ಕಡಿಮೆ ಮಾಡಿತ್ತು. ಅದನ್ನು ಮುಖಪುಟದಲ್ಲೇ ಬಳಸಿಕೊಳ್ಳುವ ಸಾಧ್ಯತೆಗಳಿದ್ದವು. ಒಳಗೆ 4 ಪುಟಗಳ ಸಮಗ್ರ ಮಾಹಿತಿಯನ್ನು ವಿಜಯ ಕರ್ನಾಟಕ ನೀಡಿತ್ತು.

ಹೊಸ ದಿಗಂತ. ಲಾಡೆನ್ ಸಂಹಾರ ಎಂಬ ಸಾಮಾನ್ಯ ಹೆಡ್ಡಿಂಗ್ ಕೊಟ್ಟಿದ್ದರೂ, ಲೇ ಓವಟ್, ಕವರೇಜ್, ವಿಷಯಗಳ ಆಯ್ಕೆ, ಎಲ್ಲದರಲ್ಲೂ ಹೊಸ ದಿಗಂತ ಮುಂದಿತ್ತು. 9/11 ಗೆ ಸರಿಯಾಗಿ, ಐತಿಹಾಸಿಕ ದಿನ 2/5 ಎಂದು ಮಾಡಿದ್ದು ಸರಿ ಇತ್ತು. ಆದರೆ ಲಾಡೆನ್ ಸಂಹಾರ ಸಾಮಾನ್ಯ ಹೆಡ್ಡಿಂಗ್ ಕೊಡುವ ಬದಲು 9/11=2/5 ಎಂದು ಮೇನ್ ಹೆಡ್ಡಿಂಗ್ ಕೊಟ್ಟಿದ್ದರೆ ಲಾಡೆನ್ ಸಾಬಿಗೆ ತುಂಬಾ ವಿಭಿನ್ನ ಹೆಡ್ಡಿಂಗ್ ಕೊಟ್ಟಂತಾಗುತ್ತಿತ್ತು.

ಕನ್ನಡ ಪ್ರಭ ಮೇಲಿನ ಯಾಕೋ ಡಲ್ ಹೊಡೆದಿತ್ತು ಎಂಬುದನ್ನು ಭಟ್ಟರು ಒಪ್ಪಿಕೊಳ್ಳಲೇಬೇಕು. ವಿಷಯಗಳ ಆಯ್ಕೆ, ವಿನ್ಯಾಸ, ಎಲ್ಲದರಲ್ಲೂ ಕನ್ನಡ ಪ್ರಭ ಸಾಕಷ್ಟು ಹಿಂದೆ ಉಳಿದಿತ್ತು. ನಿರೀಕ್ಷೆಗಳ ಭಾರದಿಂದ ಭಟ್ಟರ ಗುಂಪು ನಲುಗುತ್ತಿದೆಯಾ? ಲಾಡೆನ್ ಕಟ್ಟಿಕೊಂಡ ಸಾಮ್ರಾಜ್ಯ ನುಚ್ಚು ನೂರಾಯಿತು ಎಂಬ ಅರ್ಥದಲ್ಲಿ ಲಾ'ಡೆನ್' ನಿರ್ನಾಮ ಎಂಬ ಹೆಡ್ಡಿಂಗ್ ಕೊಟ್ಟಿತ್ತು. ಒಳಪುಟಗಳಲ್ಲಿ ಒಸರಿ ಹೋದ ಒಸಾಮಾ ಎಂದು ಲಾಡೆನ್ ಸುದ್ದಿ ಇದ್ದ ಪುಟಗಳಿಗೆ ಹೆಸರು ನೀಡಿತ್ತು. ಒಟ್ಟು ನಾಲ್ಕು ಪುಟಗಳ ಮಾಹಿತಿ ನೀಡಿದ್ದರೂ, ಯಾಕೋ ಕೊರತೆ ಇದೆ ಎಂದು ಅನ್ನಿಸದೇ ಇರಲಿಲ್ಲ. ಅಥವಾ ನಾವೇ ಕನ್ನಡಡಪ್ರಭದ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡದ್ದರಿಂದ ಹೀಗಾಯ್ತೋ ಗೊತ್ತಿಲ್ಲ.

ಪ್ರಜಾವಾಣಿಯಿಂದ ಹೆಚ್ಚಿನದನ್ನು ನಿರೀಕ್ಷಿಸುವುದು ಅಪರಾಧ. ಅದು ನಿರ್ಭಾವುಕ ಪತ್ರಿಕೆ. ಎಂಥದ್ದೇ ಮಹತ್ತರ ಬೆಳವಣಿಗೆ, ಘಟನೆ ನಡೆದರೂ ಅದು ಪ್ರಯೋಗಕ್ಕೆ ತನ್ನನ್ನು ತಾನು ಒಡ್ಡಿಕೊಳ್ಳುವುದಿಲ್ಲ. ಪಾಕ್ ನಲ್ಲಿ ಪಾತಕಿ ಲಾಡೆನ್ ಹತ್ಯೆ ಎಂದು ದಶಕಗಳ ಹಿಂದಿನ ಫಾಮ್ರ್ಯಟ್ನಲ್ಲೇ ಹೆಡ್ಡಿಂಗ್ ಕೊಟ್ಟಿತ್ತು. ಪ್ರಜಾವಾಣಿ ಬದಲಾಗದು. ಅಲ್ಲಿದ್ದವರೆಲ್ಲ ಸರಕಾರಿ ನೌಕರಿಗೆ ಸೇರಿದವರಂತೆ ಆರಾಮವಾಗಿದ್ದಾರೆ. ಅಂತಹ ನಿರ್ಜೀವ ತಂಡದಿಂದ ಹೆಚ್ಚಿನದನ್ನು ಕನ್ನಡ ಓದುಗರು ನಿರೀಕ್ಷಿಸುವುದೇ ಅಪರಾಧ.

ಉದಯವಾಣಿ ಕ್ಯಾಪ್ಟನ್ ರವಿ ಹೆಗಡೆ ಮೊದಲಿನ ಉತ್ಸಾಹ ಕಳೆದುಕೊಂಡಿರುವುದು ಎದ್ದು ಕಾಣುತ್ತಿದೆ. ಅದು ಇತ್ತೀಚೆಗೆ ಮಹತ್ತರ ಬೆಳವಣಿಗೆಗಳಾದ ಸಂದರ್ಭದಲ್ಲಿ ಸಾಬೀತಾಗುತ್ತಿದೆ. ಉದಯವಾಣಿ ಮ್ಯಾನೇಜ್ ಮೆಂಟ್ ಹಾಗೂ ರವಿ ಹೆಗಡೆ ನಡುವೆ ಅಸಮಾಧಾನದ ಹೊಗೆ ಹೊತ್ತಿಕೊಂಡಿದೆ ಎಂಬ ಸುದ್ದಿ ಹೊಸದೇನಲ್ಲ. ಆದರೆ ರವಿ ಹೆಗಡೆ ಸಂಪಾದಕ ಹುದ್ದೆ ಇಪ್ಪಿಕೊಳ್ಳುವ ಮೊದಲು ತಮ್ಮ ಇತಿಮಿತಿಗಳನ್ನು ಅರಿತುಕೊಂಡಿದ್ದರೆ ಚನ್ನಾಗಿತ್ತು. ಈ ರೀತಿ ನಿರಾಸೆಪಡುವ ಅಗತ್ಯವಿರಲಿಲ್ಲ. ಹೀಗಾಗಿ ಉದಯವಾಣಿ ಕವರೇಜ್ ಬಗ್ಗೆ ವಿಶೇಷವಾಗಿ ಹೇಳುವುದೇನೂ ಇಲ್ಲ.

ಇನ್ನು ದೃಶ್ಯ ಮಾಧ್ಯಮಕ್ಕೆ ಬಂದರೆ ಎಲ್ಲರಗಿಂತ ಉತ್ತಮವಾಗಿ ಕವರ್ ಮಾಡಿದ್ದು ಟಿವಿ9. ಇತರೆ ಕನ್ನಡ ಚಾನೆಲ್ ಗಳಿಗಿಂತ ವೇಗವಾಗಿ ಸುದ್ದಿ ಸಂಗ್ರಹ ಮಾಡಿ ಪ್ರಸಾರ ಮಾಡುತ್ತಿತ್ತು. ಟಿವಿ9 ಪ್ರಸಾರ ಮಾಡಿ, ಒಂದು ಗಂಟೆ ಕಳೆದ ಮೇಲೆ ಇತರೆ ಚಾನೆಲ್ಗಳು ಅದನ್ನು ಫಾಲೋ ಮಾಡುತ್ತಿದ್ದವು. ಗೂಗಲ್ ಅರ್ತ್ ಸಮರ್ಥವಾಗಿ ಬಳಸಿಕೊಂಡ ಟಿವಿ9 ರಾಷ್ಟ್ರೀಯ ಚಾನೆಲ್ ಗಳಿಗಿಂತ ಮೊದಲು ಪಾಕಿಸ್ತಾನದಲ್ಲಿ ಘಟನೆಗಳು ನಡೆದ ಸ್ಥಳಗಳನ್ನು ನಿಖರವಾಗಿ ತೋರಿಸುತ್ತಿತ್ತು. ಉಳಿದ ಕನ್ನಡ ಚಾನೆಲ್ಗಳು ಟಿವಿ9 ಫಾಲೋ ಮಾಡಲು  ಯತ್ನಿಸಿದರೂ, ಸಾಕಷ್ಟು ಹಿಂದುಳಿದವು. ಇಡೀ ದಿನ ಟಿವಿ9 ಒಂದಾದ ನಂತರ ಒಂದು ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ವೀಕ್ಷಕರನ್ನು ಹಿಡಿದಿಡುವ ಪ್ರಯತ್ನ ನಡೆಸಿತ್ತು. ಟಿವಿ9 ಪ್ರಯತ್ನದಲ್ಲಿ ಖಂಡಿತಾ ಯಶಸ್ಸು ಕಂಡಿದೆ. ಈಗಷ್ಟೇ ಅಲ್ಲ. ಯಾವುದೇ ಮಹತ್ತರ ಬೆಳವಣಿಗೆಗಳು ನಡೆದಾಗಲೂ ಟಿವಿ9 ಎಂದೂ ಹಿಂದೆ ಬಿದ್ದಿಲ್ಲ ಎಂಬುದು ಕೇವಲ ಹೊಗಳಿಕೆಯ ಮಾತಲ್ಲ. ಆದರೆ ಟಿವಿ9 ಕೆಲ ಸುದ್ದಿಗಳನ್ನು ಟ್ರಾನ್ಸ್ ಲೇಟ್ ಮಾಡುವಾಗ ಸ್ವಲ್ಪ ಎಚ್ಚರ ವಹಿಸಬೇಕು. ಟ್ವಿಟ್ಟರ್ ಮೂಲಕ ಓರ್ವ ಪಾಕಿಸ್ತಾನಿ ಯಾವ ರೀತಿ ನಡು ರಾತ್ರಿ ಕಾರ್ಯಚರಣೆ ವಿವರಗಳನ್ನು ತನಗರಿಯದೇ ಟ್ವೀಟ್ ಮಾಡಿದ್ದ ಎಂಬ ಸುದ್ದಿಯನ್ನು ಎಷ್ಟು ಕೆಟ್ಟದಾಗಿ ಟ್ರಾನ್ಸ್ ಲೇಟ್ ಮಾಡಲಾಗಿತ್ತು ಎಂದರೆ, ಸುದ್ದಿ ಇದ್ದದ್ದೇ ಒಂದು. ಪ್ರಸಾರವಾಗಿದ್ದು ಮತ್ತೊಂದು ಎಂಬಂತಾಗಿತ್ತು.

ಟಿವಿ9 ನಂತರ ತಕ್ಕಮಟ್ಟಿಗೆ ಚನ್ನಾಗಿ ಈವೆಂಟ್ ಕವರ್ ಮಾಡಿದ್ದು ಸುವರ್ಣ ಟಿವಿ. ಸಂಜೆ ರವಿ ಬೆಳಗೆರೆಯನ್ನು ಕರೆಸಿ, ಲೈವ್ ಮಾಡುವ ಮೂಲಕ ಟಿವಿ9ಗೆ ತಕ್ಕ ಏಟು ಕೊಟ್ಟಿತ್ತು. ಆದರೆ ಇಡೀ ಕಾರ್ಯಕ್ರಮದ ಒಂದು ನೆಗೆಟಿವ್ ಅಂಶ ಆಂಕರ್ ಹಮೀದ್. ಹಮೀದ್ ಇಡೀ ಸಂದರ್ಶನವನ್ನು ಯಾವುದೇ ಪೂರ್ವ ತಯಾರಿ ಇಲ್ಲದೆ ಮಾಡಲು ಕುಳಿತದ್ದು, ಕೇಳುತ್ತಿದ್ದ ಪ್ರಶ್ನೆಗಳಿಂದಲೇ ಸ್ಪಷ್ಟವಾಗುತ್ತಿತ್ತು. ಅನಂತ್ ಕುಮಾರ್ಗೆ ಕೇಳಬಾರದ ಒಂದು ಪ್ರಶ್ನೆ ಕೇಳಿದಾಗ, ಅನಂತ್ ಕುಮಾರ್ ಅಷ್ಟೇ ಸ್ಪಷ್ಟವಾಗಿ, ಹಮೀದ್ ನೀವು ಪ್ರಶ್ನೆಯನ್ನು ಕೇಳಬಾರದ ವ್ಯಕ್ತಿಗೆ ಕೇಳುತ್ತಿದ್ದೀರಿ ಎಂದು ನೇರ ಪ್ರಸಾರದಲ್ಲೇ ಹಮೀದ್ ನನ್ನು ಹರಾಜು ಹಾಕಿಬಿಟ್ಟಿದ್ದರು. ಆದರೆ ರವಿ ಬೆಳಗೆರೆ ಇದ್ದದ್ದರಿಂದ ಇಡೀ ಪ್ರೋಗ್ರಾಂ ಮ್ಯಾನೇಜ್ ಆಗಿತ್ತು. ಸುವರ್ಣ ಮಾಡಿದ ಮತ್ತೊಂದು ದುರಂತ ಎಂದರೆ ಟಿವಿ9 ಅನ್ನು ಸಾರಾ ಸಗಟಾಗಿ ಕಾಪಿ ಮಾಡಲು ಹೋಗಿದ್ದು. ಟಿವಿ9 ತನ್ನ ಕಾರ್ಯಕ್ರಮಕ್ಕೆ 'ಮರ್ಗಯಾ ಲಾಡೆನ್' ಎಂದು ಹೆಸರಿಟ್ಟಿತ್ತು. ಅದನ್ನು ಬಿಡದೆ ಕಾಪಿ ಮಾಡಿದ ಹಮೀದ್, ಸುವರ್ಣ ಕಾರ್ಯಕ್ರಮಕ್ಕೆ 'ಲಾಡೆನ್ ಮರ್ಗಯಾ' ಎಂದು ಹೆಸರನ್ನು ಹಿಂದೆ ಮುಂದೆ ಮಾಡಿ ಬಳಸಿ, ಚಾನೆಲ್ ಮಾನ ಹರಾಜು ಹಾಕಿದ್ದರು. 'ಬಿಗ್ ನ್ಯೂಸ್' ಎನ್ನುವುದು ಟಿವಿ9ನ ಮತ್ತೊಂದು ಚಾನೆಲ್ ಆಗಿರುವ ಇಂಗ್ಲೀಷ್ ಚಾನೆಲ್ ನ್ಯೂಸ್ 9ನ ಬ್ರೇಕಿಂಗ್ ನ್ಯೂಸ್ ಸ್ಟೈಲ್. ಬ್ರೇಕಿಂಗ್ ನ್ಯೂಸ್ ಬದಲಿಗೆ ಬಿಗ್ ನ್ಯೂಸ್ ಎಂದು ಹಾಕುವುದು ಎಲ್ಲರಿಗೂ ಗೊತ್ತು. ಅದನ್ನೂ ಬಿಡದೆ ಸುವರ್ಣ ಕದ್ದಿದೆ. ಅದನ್ನೇ ನೇರವಾಗಿ ಕದ್ದು ಕಾಪಿ ಮಾಡಿದ ಸುವರ್ಣ ಲಾಡೆನ್ ಸತ್ತ ಸುದ್ದಿಯನ್ನು ಬಿಗ್ ನ್ಯೂಸ್ ಎಂದು ಹಾಕಿದ್ದು ನಗೆ ಪಾಟಲಿಗೆ ಕಾರಣವಾಗಿತ್ತು. ಅಂದರೆ ಹಮೀದ್ ಹಾಗೂ ಸುವರ್ಣದ ಎಡಿಟೋರಿಯಲ್ ಸಿಬ್ಬಂದಿ ಬೌದ್ಧಿಕವಾಗಿ ಎಷ್ಟು ಖಾಲಿ ಎಂಬುದನ್ನು ಇದು ಪ್ರೂವ್ ಮಾಡುತ್ತದೆ. ಇನ್ನಾದರೂ ಸುವರ್ಣ ಕಾಪಿ ಮಾಡುವುದನ್ನು ಬಿಡಬೇಕು. ಇಲ್ಲದಿದ್ದರೆ ಸುವರ್ಣ ನೋಡಲಿಕ್ಕೆ ಯಾರೂ ಇರೋಲ್ಲ.

ಇನ್ನು ಸಮಯದ ವಿಷಯಕ್ಕೆ ಬರೋದಾದರೆ ಪಾಪ! ಅವರಿಗೆ ಒಸಾಮಾನನ್ನು ಯಾವಾಗ ಹತ್ಯೆ ಮಾಡಿದ್ದು ಎಂದೇ ಸರಿಯಾಗಿ ಅರ್ಥವಾಗಿರಲಿಲ್ಲ. ಒಸಾಮಾ ಹತ್ಯೆಗೆ ಅಂತಿಮ ಕಾಯರ್ಾಚರಣೆಗೆ ಒಬಾಮಾ ಆದೇಶ ನೀಡಿದ್ದು ಶುಕ್ರವಾರ. ಅದನ್ನೆ ತಪ್ಪಾಗಿ ಅರ್ಥ ಮಾಡಿಕೊಂಡ ಶಶಿಧರ ಭಟ್ಟರು, 3 ದಿನಗಳ ಹಿಂದೆಯೇ ಒಸಾಮಾ ಹತ್ಯೆ ಎಂದು ಇಡೀ ದಿನ ಸುದ್ದಿ ಹಾಕುತ್ತಲೇ ಇದ್ದರು. ಅಲ್ಲದೆ ಒಸಾಮಾ ಇದ್ದ ಮನೆಯ ದೃಶ್ಯಗಳು ಎಲ್ಲಾ ಚಾನೆಲ್ ಗಳಿಗೂ ಲಭ್ಯವಾಗಿದ್ದವು. ಎಲ್ಲರೂ ಒಸಾಮಾ ಇದ್ದ ಮನೆಯ ಒಳಗಿನ ದೃಶ್ಯಗಳು ಎಂದು ಪ್ರಸಾರ ಮಾಡುತ್ತಿದ್ದರೆ, ಸಮಯ ಚಾನೆಲ್ ಮಾತ್ರ ಹೊಸ ವಿಷಯದ ಬೆನ್ನು ಹತ್ತಿತ್ತು. ಒಸಾಮಾ ಯಾವುದೋ ಸೆಕ್ಸ್ ಸ್ಕ್ಯಾಂಡಲ್ನಲ್ಲಿ ಸಿಕ್ಕಿ ಬಿದ್ದಿದ್ದಾನೆ ಎನ್ನುವಂತೆ 'ಒಸಾಮಾ ಬೆಡ್ ರೂಂ ದೃಶ್ಯಗಳು' ಎಂದು ನಿತ್ಯಾನಂದನ ಸುದ್ದಿಯಂತೆ ಹೆಡ್ಡಿಂಗ್ ಕೊಟ್ಟು ಪ್ರಸಾರ ಮಾಡುತ್ತಿತ್ತು. ಸಮಯ ಟಿವಿ ಶಶಿಧರ ಭಟ್ಟರ ಈ ರಸಿಕತೆ ಮೆಚ್ಚಲೇ ಬೇಕು.

ಇನ್ನು ಜನಶ್ರೀ ಬಗ್ಗೆ ಹೇಳದಿರುವುದೇ ವಾಸಿ. ರಮಾಕಾಂತ್ ಮತ್ತೊಮ್ಮೆ ತಾನಿನ್ನೂ ಎಳಸು. ಬೌದ್ಧಿಕವಾಗಿ ಖಾಲಿ ಖಾಲಿ ಎಂದು ನಡೆಸಿಕೊಟ್ಟ ಕಾರ್ಯಕ್ರಮದಲ್ಲೆ ಮತ್ತೊಮ್ಮೆ ಪ್ರೂವ್ ಮಾಡುತ್ತಿದ್ದರು. ಅನಂತ್ ಚಿನಿವಾರ್ ಇದ್ದುದರಲ್ಲೇ ಸ್ವಲ್ಪ ಜನಶ್ರೀ ಮರ್ಯಾದೆ ಉಳಿಸಲು ಹರಸಾಹಸ ಮಾಡುತ್ತಿದ್ದರು. ಆದರೆ 3-4 ತಾಸುಗಳ ಕಾಲ ಅನಗತ್ಯವಾಗಿ ಚರ್ಚೆ ಎಳೆದು ರಸ ಮುಗಿದ ಚ್ಯೂಯಿಂಗ್ ಗಂ ಮಾಡಿ ಬಿಟ್ಟಿದ್ದರು. ಜನಶ್ರೀ ಇಂತಹ ಮಹತ್ತರ ಬೆಳವಣಿಗೆ ಇರುವ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸಲು ಪದೇ ಪದೇ ಎಡವುತ್ತಿದೆ. ಜನಶ್ರೀ ಫುಲ್ ರಿಪೇರಿ ಆಗಬೇಕು ಎಂಬುದನ್ನು ಇದು ಮತ್ತೊಮ್ಮೆ ಸಾಬೀತು ಪಡಿಸುತ್ತದೆ.